ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ೪.೦ ಭಾನುವಾರದ ಬಾಡೂಟಕ್ಕೆ ಬ್ರೇಕ್ ಹಾಕಿದೆ.ಅಲ್ಲದೆ, ರಜಾದಿನ ಭಾನುವಾರದಂದು ಎಣ್ಣೆ ಸಿಗುವುದಿಲ್ಲ.ಹೀಗಾಗಿ ಮದ್ಯಪ್ರಿಯರಿಗೆ ಭಾನುವಾರ ಎಣ್ಣೆ ನೆನಪಿಸಿಕೊಳ್ಳುವುದು ಕಷ್ಟವಾಗಲಿದೆ.
ಹೌದು,ನಾಳೆಯಿಂದ ಬಸ್ ಸಂಚಾರ ಸೇರಿದಂತೆ ಹಲವಾರು ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು,ಹAತ ಹಂತವಾಗಿ ಈಗಾಗಲೇ ಲಾಕ್ಡೌನ್ ತೆರವುಗೊಳಿಸಲಾಗುತ್ತಿದೆ.ಆದರೆ ಭಾನುವಾರಗಳಲ್ಲಿ ಇಡೀ ರಾಜ್ಯ ಕಂಪ್ಲೀಟ್ ಲಾಕ್ಡೌನ್ ಆಗಲಿದೆ, ಮದ್ಯ ಮತ್ತು ಮಾಂಸ ಮಾರಾಟಕ್ಕೆ ಅವಕಾಶ ಇಲ್ಲ ಮಾತ್ರ ನೀಡಿಲ್ಲ.
ಅಂದ ಹಾಗೇ ವಿಧಾನಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಮುಂದಿನ ದಿನಗಳಲ್ಲಿ ಭಾನುವಾರದ ಎಲ್ಲಾ ದಿನಗಳಲ್ಲೂ ರಾಜ್ಯಾದ್ಯಂತ ಕಡ್ಡಾಯವಾಗಿ ಲಾಕ್ಡೌನ್ ಮಾಡಲಾಗುವುದು. ಯಾವುದೇ ಕಾರಣಕ್ಕೂ ಮದ್ಯ ಮತ್ತು ಮಾಂಸ ಮಾರಟಕ್ಕೆ ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ ಮಾಂಸ ಪ್ರಿಯರು ಹಿಂದಿನ ದಿನವೇ ಮಾಂಸ ಖರೀದಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು