ಹುಬ್ಬಳ್ಳಿ/ಧಾರವಾಡ : ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾನಗರಿ ಧಾರವಾಡದ ಅವಳಿ ನಗರದ ಜನತೆ ಕೊರೊನಾ ಲಾಕ್ ಡೌನ್ ನಿಂದ ಚೇತರಿಸಿಕೊಳ್ಳುವ ಮುನ್ನವೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಿದೆ.
ಹೌದು,ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಕಟು ಸತ್ಯ.ಅದೇನಪ್ಪಾ ಅಂದ್ರೆ ದಿಢೀರ್ ಆಗಿ ಮೇ ೧೬ರಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಒಂದು ಆದೇಶ ಹೊರಡಿಸಿದ್ದಾರೆ.
ಸದ್ಯ ಆದೇಶದಲ್ಲಿ ೨೦೨೦-೨೦೨೧ ಸಾಲಿನ ಆಸ್ತಿ ತೆರಿಗೆಯನ್ನು ರಾಜ್ಯ ಸರಕಾರದ ಆದೇಶದಅನ್ವಯ ಕಡ್ಡಾಯವಾಗಿ ಪರಿಷ್ಕರಣೆ ಮಾಡಿದ್ದು, ಏಪ್ರಿಲ್ ಒಂದರಿ0ದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ ಎಂದು ಅಧಿಸೂಚನೆ ಹೊರಡಿಸಿದಿದ್ದಾರೆ.
ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ