ಬೆ0ಗಳೂರು: ಬೆಂಗಳೂರಿನ ಕೆ.ಆರ್.ಪುರ ವೈಟ್ ಫೀಲ್ಡ್ ರಸ್ತೆಯಲ್ಲಿ ಸಂಚರಿಸುತ್ತಿದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಅಂದ ಹಾಗೇ ಮಹದೇವಪುರ ಪೆಟ್ರೋಲ್ ಬಂಕ್ನಲ್ಲಿ ಪುಲ್ ಟ್ಯಾಂಕ್ ಮಾಡಿಸಿದ ಕಾರಿನ ಮಾಲೀಕ ಬಂಕ್ ನಿಂದ ಸ್ವಲ್ಪ ದೂರದಲ್ಲಿ ಕಾರನ್ನು ಚಲಾಯಿಸಿದ್ದರು.ಆದರೆ ಪೆಟ್ರೋಲ್ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ಸ್ಥಳೀಯರ ಸಹಾಯದಿಂದ ನೀರು ಮತ್ತು ಮರಳು ಸುರಿದು ಕಾರಿನ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.ಆದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.ನಂತರ ಸ್ಥಳೀಯ ಕಾರಿನ ಗ್ಯಾರೇಜ್ನಲ್ಲಿದ್ದ ನೀರಿನ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಅದೃಷ್ಟವಷತ್ ಕಾರಿನಲ್ಲಿದ ಮೂವರು ಸ್ನೇಹಿತರು ಅಪಾಯದಿಂದ ಪಾರಾಗಿದ್ದಾರೆ.
ಪರಿಸರ ಮಂಜುನಾಥ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು