ಆರೋಗ್ಯ / HEALTH

ಏನೋಲೇ…ಹಲ್ಲು ಬಂದಿದ್ದಾವಾ..ಅಮ್ಮ..ಅಕ್ಕಾ..ಅ0ತೆಲ್ಲಾ ಬೈತಿಯಂತೆ..ಬಾಲ ಕಟ್ ಮಾಡಬೇಕಾ..?

Published

on

ಆನೇಕಲ್(ಬೆಂ.ನಗರ): ಏನೋಲೇ… ಹಲ್ಲು ಬಂದಿದ್ದಾವಾ..ಅಮ್ಮ..ಅಕ್ಕಾ..ಅ0ತೆಲ್ಲಾ ಬೈತಿಯಂತೆ..ಯಾಕೋ ಕೊಬ್ಬು ಹೆಚ್ಚಾಗಿದೆಯಾ..? ಕಡಿತೀನೀ..ಕೊಚ್ಚೀತ್ತೀನಿ ಅಂತೀಯ0ತೆ..ಜನಗಳೇನೂ ತರಕಾರಿನಾ..?ಯಾಕೋ..ಬಾಲ ಕಟ್ ಮಾಡಬೇಕಾ..?
ಹೀಗೆ ಕರ್ನಾಟಕದ ಸಿಂಗ0 ಎಂದೇ ಖ್ಯಾತಿ ಪಡೆದಿರೋ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ರವಿ ಡಿ ಚೆನ್ನಣ್ಣನವರ್ ರೌಡಿಯೊಬ್ಬನಿಗೆ ಬೆವರಿಳಿಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಅಂದ ಹಾಗೇ ಇಂದು ಆನೇಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಪೆರೇಡ್ ನಡೆಸಲಾಯಿತು.ಈ ವೇಳೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ರವಿ ಡಿ ಚೆನ್ನಣ್ಣನವರ್ ಬಾಲ ಬಿಚ್ಚಿದ್ದ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಠಾಣೆಗೆ ಕರೆಸಿದ್ದ ಪುಡಿ ರೌಡಿಗಳಿಗೆ ತಮ್ಮದೇ ಶೈಲಿಯಲ್ಲಿ ಬೆಂಡಿತ್ತಿದ ರವಿ ಡಿ ಚೆನ್ನಣ್ಣನವರ್, ಬಾಲ ಬಿಚ್ಚಿದರೆ ಬಾಲ ಕತ್ತರಿಸುತ್ತೇವೆ ಎಂದರಲ್ಲದೆ, ಜನಪ್ರತಿನಿಧಿಗಳಾಗಿ ಬೆದರಿಕೆ ಹಾಕಿದರೆ ಸುಮ್ಮನಿರಲ್ಲ. ನೆಲಮಂಗಲವೇ ಸೈಲೆಂಟ್ ಆಗಿರಬೇಕಾದರೆ ಆನೇಕಲ್‌ನಲ್ಲಿ ನೆಮ್ಮದಿ ಹಾಳು ಮಾಡುತ್ತಿದ್ದೀರಾ ಎಂದೆಲ್ಲಾ ತರಾಟೆಗೆ ತೆಗೆದುಕೊಂಡರು.
ಜೊತೆಗೆ ಸೈಲೆಂಟ್ ಆಗದೇ ಹೋದರೆ ನಾವು ವೈಲೆಂಟ್ ಆಗಬೇಕಾಗುತ್ತದೆ.. ಇನ್ನು ಮುಂದೆ ನಿಮ್ಮ ಚಟುವಟಿಕೆ ಮುಂದುವರಿದರೆ ಬಾಲ ಕತ್ತರಿಸುತ್ತೇವೆ. ಕಡಿಯುತ್ತೇವೆ, ಕೊಲ್ಲುತ್ತೇವೆ ಎನ್ನಲು ನೀವೇನೂ ಜನರನ್ನು ಸಲಹಿದ್ದೀರಾ ಎಂದು ಪ್ರಶ್ನಿಸಿದರು.
ಇನ್ನು ಆನೇಕಲ್‌ನಲ್ಲಿ ಇತ್ತೀಚೆಗೆ ಚಟುವಟಿಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ನಡೆಸಲಾದ ಈ ರೌಡಿ ಪರೇಡ್‌ನಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಸೈಲೆಂಟಾಗಿದ್ದವರ ಕೇಸ್ ಕ್ಲೋಸ್ ಮಾಡಿದ ರವಿ ಡಿ ಚೆನ್ನಣ್ಣನವರ್ ಸ್ಥಳದಲ್ಲೇ ಪ್ರಕರಣದ ಪುಸ್ತಕಕ್ಕೆ ಸೈನ್ ಮಾಡಿದರು. ಆದರೆಕೇಸ್ ಕ್ಲೋಸ್ ಆದವರಿಗೂ ಎಚ್ಚರಿಕೆ ನೀಡಿದ ಎಸ್ಪಿ ಇನ್ನು ಮುಂದೆ ಕುಟುಂಬದವರ ಜೊತೆ ಚೆನ್ನಾಗಿರಬೇಕು ಎಂದು ಬುದ್ದಿಮಾತು ಹೇಳಿ ಮತ್ತೆ ಬಾಲ ಬಿಚ್ಚಿದ್ರೆ ರೌಡಿ ಶೀಟ್ ಓಪನ್ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Click to comment

Trending

Exit mobile version