ಶಿರಾ(ತುಮಕೂರು): ಕೋವಿಡ್-೧೯ ಲಾಕ್ಡೌನ್ನಿಂದ ತೊಂದರೆಗೀಡಾದ ಶಿರಾ ತಾಲ್ಲೂಕಿನ ನಿವಾಸಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಪತಿ ಕಲ್ಕೆರೆ ರವಿಕುಮಾರ್ ನೆರವಾಗುತ್ತಿದ್ದಾರೆ.
ಸದ್ಯ ವಿಜಯಲಕ್ಷ್ಮಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಅಗಿರುವ ಕಲ್ಕೆರೆ ರವಿಕುಮಾರ್ ತಾಲ್ಲೂಕಿನಲ್ಲಿ ಸುಮಾರು ೨೨ ಸಾವಿರ ದಿನಸಿ ಕಿಟ್ಗಳನ್ನು ವಿತರಿಸುತ್ತಿದ್ದಾರೆ. ಸಾಕಷ್ಟು ಜನರು ಸರದಿಯಲ್ಲಿ ನಿಂತು ಆಹಾರ ಸಾಮಗ್ರಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಕಲ್ಕೆರೆ ರವಿಕುಮಾರ್ ನೀಡಿದ ನೆರವಿನ ಹಸ್ತಕ್ಕೆ ಸಾಕಷ್ಟು ಮಂದಿ ಸಾಮಾಜಿಕ ಜಾಲಗಳಲ್ಲಿ ಅಭಿನಂದನೆ ಸಲ್ಲಿಸಿದ್ದು,ಅಗತ್ಯವಿದ್ದವರಿಗೆ ನೀವು ಸದ್ದಿಲ್ಲದೆ ನೆರವಾಗುತ್ತಿದ್ದೀರಿ. ಜೈ ಹೋ” ಎಂದು ಬರೆದು ಪೋಸ್ಟ್ ಕೂಡ ಮಾಡುತ್ತಿದ್ದಾರೆ.
ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)