ರಾಯಚೂರು:ದಿನೇ ದಿನೇ ತನ್ನ ರೌದ್ರನರ್ತನವನ್ನು ತೋರುತ್ತಿರುವ ಕೊರೊನಾ ಸೋಂಕಿಗೆ ಇಡೀ ಜನಸಮುದಾಯವೇ ತತ್ತರಿಸಿ ಹೋಗಿದೆ.ಎಲ್ಲಿ ನೋಡುದ್ರು ಕೊರೊನಾ ಕೊರೊನಾ.. ಈ ಕೊರೊನಾ ಸೋಂಕಿನಿಂದ ಪರಾಗಲೂ ರಾಜ್ಯ ಸರ್ಕಾರ ಲಾಕ್ ಡೌನ್ ಎಂಬಾ ಅಸ್ತ್ರವನ್ನು ಪ್ರಯೋಗ ಮಾಡಿತ್ತು, ಸ್ವಲ್ಪ ಮಟ್ಟಿಗೆ ನಿಯಂತ್ರಣ ಕಂಡಿದ್ದ ಕೊರೊನಾ ಲಾಕ್ ಡೌನ್ ಸಡಲಿಕೆ ಮಾಡಿದ್ದೆ ತಡ ಮತ್ತೆ ತನ್ನ ಹಾವಳಿಯನ್ನು ಶುರುಮಾಡಿದೆ. ರಾಯಾಚೂರಿನಲ್ಲಿ ಲಾಕ್ ಡೌನ್ ಮುಕ್ತಗೊಳಿಸಿದ ದಿನವೇ ಕೊರೋನಾ ಶತಕ ಬಾರಿಸಿದ್ದು ಒಂದೇ ದಿನ 135 ಹೊಸ ಪ್ರಕರಣಗಳು ದೃಢವಾಗಿದ್ದು, ರಾಯಾಚೂರಿನಲ್ಲೇ 100 ಪಾಸಿಟೀವ್ ಕೇಸ್ ಗಳು ಪತ್ತೆಯಾಗಿವೆ.ಮಾನ್ವಿ – 25, ಸಿಂಧನೂರು – 5, ಲಿಂಗಸುಗೂರು – 4, ದೇವದುರ್ಗ ತಾಲ್ಲೂಕಿನಲ್ಲಿ – 1 ಪ್ರಕರಣ ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1045 ಕ್ಕೆ ಏರಿಕೆಯಾಗಿದೆ..ರಾಜ್ಯಸರ್ಕಾರದ ಒಂದು ವಾರದ ಲಾಕ್ ಡೌನ್ ಎಷ್ಟರ ಮಟ್ಟಿಗೆ ಕೆಲಸಮಾಡಿದೆ ಎಂದು ಜನರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ..