ಸಿಂಧನೂರು: ಕೆಲದಿನಗಳಿಂದ ಸಿಂಧನೂರಿನಲ್ಲಿರುವ ಸಬ್ ರಿಜಿಸ್ಟರ್ ಆಫೀಸ್ ಅನ್ನು ಬಂದ್ ಮಾಡಲಾಗಿತ್ತು.ಇಂದು ಕಚೇರಿಯನ್ನು ಪುನಃ ತೆರೆಯುತ್ತಿದ್ದಂತೆ ಜನ ಕಛೇರಿಗೆ ಗುಂಪು ಗುಂಪಾಗಿ ಸೇರಿದ್ದು ಸಾಮಾಜಿಕ ಅಂತರವನ್ನು ಮರೆತ್ತಿದ್ದರು.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನ ದಂಡಧಿಕಾರಿ ಮಂಜುನಾಥ ಭೋಗಾವತಿ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ಸಾರ್ವಜನಿಕರಿಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದು, ಸಾರ್ವಜನಿಕರು ಸಲ್ಲಿಸಿದ ಅರ್ಜಿಯ ದಿನಾಂಕದ ಪ್ರಕಾರ, ದಿನಕ್ಕೆ 50 ರಂತೆ ಮಾತ್ರ ವಿಲೇವಾರಿ ಮಾಡುವಂತೆ ಸೂಚಿಸಿ, ವಿಲೇವಾರಿ ಮಾಡುವ ಅರ್ಜಿಗಳನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.