ಬಳ್ಳಾರಿ

ನೋಡಿ ಸ್ವಾಮಿ ನಮ್ಮ ರಸ್ತೆ ಇರೋದು ಹೀಗೆ ನೇ …!

Published

on

ಬಳ್ಳಾರಿ : ಜನ ಪ್ರತಿನಿಧಿಗಳು ಓಟಿಗಾಗಿ ರಸ್ತೆ ಮಾಡಿಸುತ್ತೇವೆ ಅಂತ ಭಾಷಣ ಹೇಳಿದ್ದೇ ಹೇಳಿದ್ದು, ಗೆದ್ದ ಮೇಲೆ ಆ ಊರಿನ ಕಡೆ ಮುಖ ಕೂಡ ತೋರಿಸಲ್ಲ, ಅದೇ ಸಾಲಿಗೆ ಈ ಪುಟ್ಟ ಗ್ರಾಮ ಸೇರ್ಪಡೆಯಾಗಿದೆ. ನಿಮಗೆ ಕಾಣಿಸುತ್ತಿರುವ ಈ ಫೋಟೋ, ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಪುಟ್ಟ ಗ್ರಾಮ. ದಿನ ನಿತ್ಯ ಈ ಗ್ರಾಮಾದ ಜನರು ಓಡಾಡಬೇಕಾದರೆ, ಇದೇ ಮಾರ್ಗವಾಗಿ ಹೋಗಬೇಕಾಗುತ್ತೆ. ಅರೇ ದಾರಿ ಎಲ್ಲಿದೆ ಅಂತ ಕೇಳ ಬೇಡಿ.. ಮೊಣಕಾಲು ಉದ್ದ ಬರುವ ಈ ಕೆಸರೇ ಊರಿನ ಹೆದ್ದಾರಿಯಾಗಿದೆ.ಸಿರುಗುಪ್ಪ ತಾಲೂಕಿನ ಮುದ್ದಟನೂರು ಗ್ರಾಮ ಪಂಚಾಯತಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಸಾಕ್ಷಿ, ಹದಗೆಟ್ಟ ರಸ್ತೆಯನ್ನ ಸರಿ ಮಾಡಿ ಎಂದು ಮನವಿ ಮಾಡಿದಕ್ಕೆ ಕಳೆದ ತಿಂಗಳು ಮಣ್ಣು ಹಾಕಿದ್ದಾರೆ. ಆದರೆ ಮಳೆ ಬಂದ ಕಾರಣ ಇದೀಗ ಈ ರಸ್ತೆ ಕೆಸರು ಗದ್ದೆಯಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು, ಹಾಗು ಜನ ಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯರ ಆಕ್ರೋಶದ ಕಟ್ಟೆ ಒಡೆಯುವ ಮುನ್ನ ಜನ ಪ್ರತಿನಿಧಿಗಳು ಹಾಗು ಅಧಿಕಾರಿಗಳು ಗಮನ ಹರಿಸ್ತಾರಾ ಅಂತ ಕಾದು ನೋಡಬೇಕಿದೆ

ವರದಿ- ವೆಂಕಟೇಶ್ ಯು.ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Click to comment

Trending

Exit mobile version