ಸಿಂಧನೂರು: ನಗರಸಭೆಗೆ ನೂತನವಾಗಿ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಜೀನೂರು, ಪ್ರಶಾಂತ್ ಕಿಲ್ಲೆದ್ , ರವಿಕುಮಾರ್,ಶ್ರೀಮತಿ ಅನಿತಾ ನಾಗರಾಜ ಅಂಗಡಿ,ಶ್ರೀಮತಿ ಸುನೀತಾ ಶ್ರೀರಾಮಮೂರ್ತಿ ರಾಠೋಡ್ ಇವರನ್ನು ಸಿಂಧನೂರು ನಗರದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಿಂಧನೂರು ನಗರ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರುಪಾಪುರ, ತುಂಗಾಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ತುರುವಿಹಾಳ, ಬಿಜೆಪಿ ಮುಖಂಡರಾದ ಜಡಿಯಪ್ಪ ಹೂಗಾರ್, ಮಹಾದೇವ ನಾಯಕ, ಅಮರೇಶ.ಕೆ. ಸೇರಿದಂತೆ ಹಲವರಿದ್ದರು.
ವರದಿ- ಸೈಯದ್ ಬಂದೇ ನವಾಜ್ ಜನತಾ ಎಕ್ಸ್ಪ್ರೆಸ್ ಸಿಂಧನೂರು