ಚಿತ್ರದುರ್ಗ

ಸುಪಾರಿ ಕಿಲ್ಲರ್ಸ್ ಎಂದು ಯುವಕರನ್ನ ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಮಸ್ಥರು!

Published

on

ಚಿತ್ರದುರ್ಗ : ಸುಪಾರಿ ಕಿಲರ್ಸ್ ಎಂದು ಯುವಕರನ್ನ ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಚಿತ್ರದುರ್ಗ ತಾಲೂಕಿನಲ್ಲಿ ನಡೆದಿದೆ.ಆಗಸ್ಟ್ ೦೭ ರಂದು ಚೊಳಗುಡ್ಡ ನಿವಾಸಿ ಜಯಸೂರ್ಯ, ಹೊಳಲ್ಕೆರೆ ತಾಲೂಕಿನ ಮಾರುತಿ, ಶರತ್ ಹಲ್ಲೆಗೊಳಗಾದ ಯುವಕರು. ಆಗಸ್ಟ್ ೭ ರಂದು ಗಾರೆ ಕೆಲಸ ಮಾಡುತ್ತಿದ್ದ ಯುವಕರನ್ನ ಸುಪಾರಿ ಕಿಲರ್ಸ್ ಎಂದು ನಂಬಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬೇರೆ ಪ್ರಕರಣಕ್ಕೂ ತಳುಕು ಹಾಕಿ ಯುವಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಭರಮಾಸಾಗರ ಪೊಲೀಸ್ ಠಾಣೆಯಲ್ಲಿ ಸುಪಾರಿ ಹಂತಕರೆಂದು ದೂರು ನೀಡಿದ್ದಾರೆ.ಇದೀಗ ಅಮಾಯಕ ಹುಡುಗರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಪೂರ್ವಪರ ವಿಚಾರಿಸದೇ ಅಮಾಯಕ ಯುವಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version