ಹಾಸನ:ಅನೈತಿಕ ಸಂಬಂಧದ ಆರೋಪದ ಹಿನ್ನೆಲೆ ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ವಾಗಿನಕೆರೆ ಗ್ರಾಮದ ಕಲ್ಲಹಳ್ಳಿಯಲ್ಲಿ ನಡೆದಿದೆ.52 ವರ್ಷದ ಪತಿ-ಚಂದ್ರೇಗೌಡ ಪ್ರತಿದಿನ ಮನೆಗೆ ಬಾರದೆ ಇರುವುದರಿಂದ ಅನುಮಾನಗೊಂಡ ಪತ್ನಿ-ಇಂದ್ರಮ್ಮ ಕಳೆದ ರಾತ್ರಿ ಪತಿಯನ್ನು ಪ್ರಶ್ನಿಸಿದ್ರು, ಅನೈತಿಕ ವಿಚಾರ ಇದೆ ಎನ್ನುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಕೋಪತೀವ್ರ ವಿಕೋಪಕ್ಕೆ ತಿರುಗಿದ ಕಾರಣ ಪತ್ನಿ ಮನೆಯಲ್ಲಿ ಇದ್ದಂತಹ ಮಚ್ಚಿನಿಂದ ಪತಿ ಮೇಲೆ ಮಾರಾಣಾಂತಿಕ ಹಲ್ಲೇ ನಡೆಸಿದ್ದಾರೆ. ಮಚ್ಚಿನೇಟಿನಿಂದ ತೀವ್ರವಾಗಿ ಗಾಯಗೊಂಡ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು,ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೇಲೂರು ಪೋಲಿಸರು ಭೇಟಿ ನೀಡಿದ್ದು ಪತ್ನಿ ಇಂದ್ರಮ್ಮನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..