ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಬಿಜಿಪುರ,ಕಗ್ಗಲಿಪುರ, ಸರಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಭೂರಹಿತ ಕೃಷಿ ಕಾರ್ಮಿಕರಿಗೆ ನಮ್ಮ ಭೂಮಿ ನಮ್ಮತೋಟ ಯೋಜನೆಯಡಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಬಿ ಜಿ ಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಶಾಸಕ ಡಾ.ಕೆ ಅನ್ನದಾನಿ ಉದ್ಘಾಟಿಸಿ ಮಾತನಾಡಿ,ಈ ಹಿಂದೆ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಮ್ಮ ಭೂಮಿ ತೋಟ ಯೋಜನೆಯಡಿ 2007-08 ನೇ ಸಾಲಿನ ಮಂಜೂರಾಗಿದ್ದ ಹಕ್ಕು ಪತ್ರವನ್ನು ಇನ್ನೂ ವಿತರಣೆ ಮಾಡದೇ ಇರುವುದು ವಿಷಾದನೀಯ ಸಂಗತಿ. ಶಾಸಕರಾದವರು ಸಾರ್ವಜನಿಕ ಅಭಿವೃದ್ಧಿ ಕೆಲಸವನ್ನು ಮಾಡಬೇಕು ಎಂದರು. ಇನ್ನೂ ಒಬ್ಬ ಪಲಾನುಭವಿಗೆ 5 ಕುಂಟೆ ಕೃಷಿ ಬಳಕೆ ಮಾಡಿಕೊಳ್ಳಲು ಉಚಿತವಾಗಿ ನೀಡುವ ಜೊತೆಗೆ ಕೃಷಿ ಹೊಂಡವನ್ನು ಮಾಡಿಕೊಳ್ಳಲಾಗುತ್ತದೆ ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ತಾ.ಪಂ ಇಓ ಸತೀಸ್, ಜೆಡಿಎಸ್ ಮುಖಂಡ ಪ್ರಭುಸ್ವಾಮಿ, ಗುರುಸ್ವಾಮಿ ಅಶ್ವಥ್, ರಾಜಶೇಖರ್, ಕಾಂತರಾಜು, ಸೇರಿದಂತೆ ಮತ್ತಿತ್ತರರು ಇದ್ದರು.
ವರದಿ: ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ