ಬಾಹುಬಲಿ ಅಂತಹ ಹಿಟ್ ಚಿತ್ರವನ್ನು ಕೊಟ್ಟ ಮೇಲೆ ಪ್ರಭಾಸ್ ಮತ್ತು ಅನುಷ್ಕಾ ಜೋಡಿ ಎಲ್ಲೇಡೆ ಜನ-ಮನ ಗೆದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಒಂದರ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಿರುವ ಪ್ರಭಾಸ್ ಬಾಹುಬಲಿ ಯಶಸ್ಸಿನ ಬಳಿಕ ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಲು ಅಧಿಪುರುಷ್ ಆಗಿ ಪ್ರಭಾಸ್ ಮತ್ತೆ ಬರ್ತಾ ಇದ್ದಾರೆ.ಈ ಚಿತ್ರ ಮೂರು ಭಾಗಗಳನ್ನು ಒಳಗೊಂಡಿದ್ದು, ಪರಶುರಾಮ, ಶ್ರೀರಾಮ,ಶ್ರೀಕೃಷ್ಣರ ಜೀವನ ವಿಷಯಗಳ ಮೇಲೆ ಆಧಾರಿತವಾಗಿರುತ್ತದೆಯೆಂದು ಮೂಲಗಳಿಂದ ತಿಳಿದು ಬಂದಿದ್ದು ಪ್ರಭಾಸ್ ಅವರ ಚಿತ್ರವನ್ನು ತೆರೆ ಮೇಲೆ ವೀಕ್ಷೀಸಲು ಪ್ರಭಾಸ್ ಫ್ಯಾನ್ಸ್ ತುದಿಗಾಲಿನಲ್ಲಿ ನಿಂತು ಕಾಯ್ತಾಯಿದ್ದಾರೆ.
ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..