ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವ ಹಿನ್ನೆಲೆ ಗುಂಡಾ, ರೌಡಿ, ಜೂಜು, ಮಟಕಾ, ಬಡ್ಡಿ ವ್ಯವಹಾರ ಮತ್ತು ಇನ್ನಿತರೇ ಅಕ್ರಮ ದಂದೆಗಳಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದ್ದು, ಇದರ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಗೆ ನೂತನ ಅಧಿಕಾರಿಯಾಗಿ ಡಿ.ಸಿ.ಪಿ. ನೂಡಲ್ ನೇಮಕಗೊಂಡಿದ್ದು, ಅಕ್ರಮ ಚಟುವಟಿಕೆಗಳ ನೊಡೆಲ್ ಅಧಿಕಾರಿಯನ್ನಾಗಿ ಡಿಸಿಪಿ ಕೃಷ್ಣಕಾಂತ ರವರನ್ನು ನೇಮಕ ಮಾಡಲಾಗಿದೆ.ಇನ್ನೂ ಸಾರ್ವಕನಿಕರಿಗೆ ಡಿಜಿಪಿ ಪ್ರವೀಣ್ ಸೂದ್ ನೇರವಾಗಿ ಪೋನ್ ಮುಖಾಂತರ ಅಥವಾ ಖುದ್ದಾಗಿ ಭೇಟಿ ಮಾಡಿ ಮಾಹಿತಿ ಕೊಡಲು ಅವಕಾಶವನ್ನು ನೀಡಿದ್ದಾರೆ.
ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ..