ಶಿರಾ

62 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು- ಮಾಜಿ ಸಚಿವ ಟಿ.ಬಿ ಜಯಚಂದ್ರ..!

Published

on

ಶಿರಾ: ತಾಲ್ಲೂಕಿನ ಲಕ್ಷ್ಮಿಸಾಗರ ಕೆರೆ, ದೇವರಹಳ್ಳಿ ಕೆರೆ ಸೇರಿದಂತೆ ತಾಲ್ಲೂಕಿನ 62 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಯಲ್ಲಿ ನೀರು ಹರಿಸಲಾಗುವುದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ತಾಲೂಕಿನ ಲಕ್ಷ್ಮಿ ಸಾಗರ ಗ್ರಾ.ಪಂ.ವ್ಯಾಪ್ತಿಯ ದ್ವಾರಾಳು ಗ್ರಾಮದಲ್ಲಿ ಸಿಲ್ ಡೌನ್ ಆದ ಪ್ರದೇಶದಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು. ಯೋಜನೆಗೆ ಈಗಾಗಲೇ ಟೆಂಡರ್ ಪ್ರಗತಿಯಲ್ಲಿದ್ದು 990 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದಾ ಅವರು ಹೇಳುತ್ತಾ ಹೋದರೆ 4ಸಾವಿರ ಕೋಟಿ ಪ್ಯಾಕೇಜ್ ತರಬಹುದು ಅದರೆ ನಾನು ಕೆಲಸ ಮಾಡಿ ಆನಂತರ ಎಷ್ಟು ಅನುದಾನ ತಂದಿರುವೆ ಎಂದು ಲೆಕ್ಕ ಹಾಕುವೆ ಎಂದರು. ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್, ರಾಜ್ಯದ ಕೆಲ ಉದ್ಯಮಿಗಳೊಂದಿಗೆ ಮಾತನಾಡಿದ್ದು ನಮ್ಮ ತಾಲ್ಲೂಕಿನ ಯುವಕರಿಗೆ ಉದ್ಯೋಗಗಳನ್ನು ಸೃಜಿಸಲು ಶ್ರಮ ವಹಿಸುತ್ತಿರುವುದಾಗಿ ಹೇಳಿದರು. ತಾ.ಪಂ.ಸದಸ್ಯ ಮಲ್ಲಾನಾಯ್ಕ, ಎ.ಪಿ.ಎಂ.ಸಿ ಸದಸ್ಯ ಶಶಿಧರ್ ಗೌಡ ಮುಖಂಡರಾದ ಲಕ್ಷ್ಮಿಸಾಗರ ರಾಮಕೃಷ್ಣೇಗೌಡ ಡಿ.ಅರ್.ಪ್ರದೀಪ್, ಸೋರೆಕುಂಟೆ ಸತ್ಯನಾರಾಯಣ್, ಜುಂಜೇಗೌಡ ಮತ್ತಿತರರು ಇದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ…

Click to comment

Trending

Exit mobile version