ಚಿತ್ರದುರ್ಗ

ಲಾರಿ, ಕಾರಿನ ನಡುವೆ ಡಿಕ್ಕಿ: ಲಾರಿ ಚಾಲಕನ ಮೇಲೆ ತಹಸೀಲ್ದಾರ್ ಹಲ್ಲೆ..!

Published

on

ಚಿತ್ರದುರ್ಗ:ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಆಗಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆದಿರುವ ಆರೋಪ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಬಳಿ ನಡೆದಿದೆ. ಮೊಳಕಾಲ್ಮೂರು ತಹಶೀಲ್ದಾರ್ ವಿರುದ್ಧ ಹಲ್ಲೆಗೈದ ಆರೋಪ ಕೇಳಿ ಬಂದಿದೆ. ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದಕ್ಕೆ ಮದ್ಯದ ಅಮಲಿನಲ್ಲಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ ರಂಪಾಟ ಮಾಡಿ ಹಲ್ಲೆ ಮಾಡಿದ್ದಾರಂತೆ. ಲಾರಿ ಚಾಲಕ ಶ್ರೀಕಾಂತ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಸ್ಥಳದಲ್ಲಿದ್ದವರು ತಹಶೀಲ್ದಾರ್ ಮಲ್ಲಿಕಾರ್ಜುನನಿಗೆ ತರಾಟೆಗೆ ತೆಗೆದುಕೊಂಡ್ರು. ನಂತರ ತಹಶೀಲ್ದಾರ್ ಟೆನ್ಷನ್ನಲ್ಲಿ ಹಲ್ಲೆ ನಡೆಸಿದ್ದೇನೆಂದು ಒಪ್ಪಿಕೊಂಡಿದ್ದಾರೆ. ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವರದಿ-ನಂದೀಶ್ ನಾಯಕ್ ಎಕ್ಸ್ ಪ್ರೆಸ್ ಟಿವಿ ಚಿತ್ರದುರ್ಗ

Click to comment

Trending

Exit mobile version