ಆನೆಕಲ್

ಅಧಿಕಾರ ಪಕ್ಷದ ಕಾರ್ಯಕ್ರಮದಲ್ಲಿ ಇಲ್ಲ ಸೋಷಿಯಲ್ ಡಿಸ್ಟೆಂನ್ಸ್ …!

Published

on

ಆನೇಕಲ್ : ಸಾಮಾಜಿಕ ಅಂತರ ಮರೆತ ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರು ಈಗಾಗಲೇ ಕೊರೋನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದರೂ ಸಹ ಶಿಸ್ತನ್ನು ಪಕ್ಷದಲ್ಲಿನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸುಮಾರು 1000 ಕ್ಕೂ ಹೆಚ್ಚು ಮಂದಿಯನ್ನು ಒಂದೇ ಕಡೆ ಕೂಡಿ ಹಾಕಿಕೊಂಡಿರುವ ಬಿಜೆಪಿ ಮುಖಂಡರು ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಬಿಜೆಪಿ ಪದಾಧಿಕಾರಿಗಳ ಘೋಷಣೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ಇರುವುದು ಎದ್ದು ಕಾಣುತ್ತಿತ್ತು.ಇನ್ನೂ ಅಂತರ ಕಾಪಾಡಿ ಎಂದು ಜನರಿಗೆ ಹೇಳಬೇಕಾಗಿರುವ ಅಧಿಕಾರ ಪಕ್ಷದ ಪರಿಸ್ಥಿತಿ ಇದಾಗಿದ್ದು, ಈಗಾಗಲೇ ರಾಜ್ಯಾದ್ಯಂತ ಕೊರೋನ ರಣಕೇಕೆಗೆ ಅದೆಷ್ಟೊ ಮಂದಿ ಬಲಿಯಾಗಿದ್ದಾರೆ.ಆನೇಕಲ್ ನಲ್ಲಿ ಕೊರೋನಾ 4000 ಗಡಿ ದಾಟಿದರೂ ಜನ್ರು ಮಾತ್ರ ಯಾವುದಕ್ಕೂ ಕ್ಯಾರೆ ಅನ್ನದೇ, ಸಾಮಾಜಿಕ ಅಂತರ ಮರೆತು ಕಾರ್ಯಕ್ರಮ ನಡೆಸಿದರು,ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಎಂಪಿ ನಾರಾಯಣ ಸ್ವಾಮಿ , ಶಾಸಕ ಸತೀಶ್ ರೆಡ್ಡಿ ,ಎಸ್ಟಿಆರ್ಆರ್ ಅದ್ಯಕ್ಷ ಮುನಿರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Click to comment

Trending

Exit mobile version