ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ( RDPR)ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಶಾಖೆಯ ನೂತನ ಪದಾಧಿಕಾರಿಗಳನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷ ಡಾ॥ ದೇವಿಪ್ರಸಾದ್ ಬೊಳ್ಮ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ತಾಲ್ಲೂಕು ಅಧ್ಯಕ್ಷರಾಗಿ ಭುವನಹಳ್ಳಿ ಗ್ರಾಮ ಪಂಚಾಯಿತಿಯ ಸತ್ಯನಾರಾಯಣರವರನ್ನು ಗೌರವ ಅಧ್ಯಕ್ಷರಾಗಿ ಕಣಗಾಲ್ ಗ್ರಾಮ ಪಂಚಾಯಿತಿಯ ಎಂ ಕೆ ಪುಟ್ಟಸ್ವಾಮಿ ರವರನ್ನು ಆಯ್ಕೆಮಾಡಲಾಗಿದೆ. ಉಪಾಧ್ಯಕ್ಷರಾಗಿ ರಾವಂದೂರು ಗ್ರಾಮ ಪಂಚಾಯಿತಿಯ ಎಸ್ ಜಿ ರಾಜು ,ಕಿತ್ತೂರು ಗ್ರಾಮ ಪಂಚಾಯಿತಿಯ ಸತೀಶ್ ಬಿ ಸಿ ಖಜಾಂಜಿಯಾಗಿ,ದೊಡ್ಡ ಕಮರಹಳ್ಳಿ ಗ್ರಾಮ ಪಂಚಾಯಿತಿಯ ಮಂಜು ಎಚ್.ಎಸ್ ಕಾರ್ಯದರ್ಶಿಯಾಗಿ ,ಕೋಮಲಾಪುರ ಗ್ರಾಮ ಪಂಚಾಯಿತಿಯ ಕುಮಾರ್ ಕೆ ಜಿ ರವರನ್ನು ಸಹ ಕಾರ್ಯದರ್ಶಿಯಾಗಿ , ಬೆಟ್ಟದತುಂಗ ಗ್ರಾಮ ಪಂಚಾಯಿತಿಯ ಆನಂದ್ ಕೆ ರವರನ್ನು ತಾಲೂಕು ಸಂಚಾಲಕರಾಗಿ ,ಎನ್ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಮಹದೇವ್ ಅವರನ್ನು ಸಹ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ತಾಲೂಕು ನೂತನ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗಳನ್ನು ಸರ್ಕಾರ ಖಾಯಂಗೊಳಿಸಬೇಕು. ಪ್ರತಿ ತಿಂಗಳು ಮೊದಲನೇ ವಾರ ನೌಕರರಿಗೆ ವೇತನ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.
ವರದಿ- ಮಾಗಳಿ ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ