ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದಲ್ಲಿ ತಳವಾರ & ಪರಿವಾರ ಸಮುದಾಯ ಜನರು ಕೇಂದ್ರ ಸರಕಾರ, ನಾಯಕ ಸಮನಾಂತರ ತಳವಾರ & ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.ಆದರೆ ರಾಜ್ಯ ಸರಕಾರ ದುರದ್ದೇಶ ಜೊತೆಗೆ ರಾಜಕೀಯ ಷಡ್ಯಂತ್ರದಿಂದ ಜಾತಿ ಪ್ರಮಾಣ ಪತ್ರ ಕೊಡಲು ಮೀನಾ ಮೇಷ ಮಾಡುತ್ತಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾದರೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ನಮ್ಮ ಮಕ್ಕಳು ಜಾತಿ ಪ್ರಮಾಣ ಪತ್ರಕ್ಕಾಗಿ ದಿನವೂ ಕಚೇರಿಗೆ ಅಲೆದಾಟ ಮಾಡುತ್ತಿದ್ದಾರೆ.ಸರಕಾರ ಕೇಂದ್ರ ಸರಕಾರದ ಆದೇಶ ಪಾಲಿಸಿ ಸಂವಿಧಾನ್ ಉಳಿಸಬೇಕು. ರಾಜ್ಯ ಸರಕಾರ ಯಾರದೊ ಅಣತೆಯಂತೆ ಕೆಲಸ ಮಾಡದೇ ಸಂವಿಧಾನದ ಕಾಯಿದೆ ಕಾನೂನುಗಳನ್ನು ರಕ್ಷಣೆ ಜೊತೆಗೆ ಪಾಲನೆ ಮಾಡಬೇಕು ಎಂಉ ಮುಖಂಡ ಚಿದಾನಂದ ವಾಲಿಕಾರ ತಿಳಿಸಿದರು.ಒಂದು ವೇಳೆ ಈ ಕೆಟ್ಟ ಸ್ಥಿತಿ ಮುಂದುವರೆದರೆ ನಮ್ಮ ಸಮುದಾಯದ ಪ್ರತಿ ಕುಟುಂಬದಿಂ ಉಗ್ರ ಹಾರಾಟ ಮಾಡಬೇಕಾಗುತ್ತೆದೆ ಎಂದು ಎಚ್ಚರಿಕೆ ನೀಡಿದರು..
ವರದಿ: ಶಂಕರ್ ಜಮಾದಾರಎಕ್ಸ್ ಪ್ರೆಸ್ ನ್ಯೂಸ್ ಇಂಡಿ