ಮಾಲೂರು: ಜ್ಯುವೆಲ್ಲರಿ ಮಳಿಗೆ ಎದುರು ನಿಲ್ಲಿಸಿದ್ದ ಬೈಕ್ ನಲ್ಲಿ ಸುಮಾರು 82 ಸಾವಿರ ರೂಪಾಯಿ ನಗದು ಇದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದ ಕಳ್ಳರು ಹಣ ಎಗರಿಸಿ ಪರಾರಿಯಾಗಿರುವ ಘಟನೆ ಮಾಲೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಸುಶೀಲ್ ಜ್ಯೂವೆಲ್ಲರಿ ಶಾಪ್ ಮುಂದೆ ರಾಜಪ್ಪ ಎಂಬಾತ ಬೈಕ್ ನಿಲ್ಲಿಸಿ ಜ್ಯೂವೆಲ್ಲರಿ ಶಾಪ್ ಗೆ ಬಡ್ಡಿ ಹಣ ಕಟ್ಟಲು ತೆರಳಿದ್ದರು. ಇದನ್ನು ಗಮನಿಸಿದ ನಾಲ್ಕು ಜನ ಕಳ್ಳರು ಪಲ್ಸರ್ ಬೈಕ್ ನಲ್ಲಿ ಬಂದು ಹೊಂಚು ಹಾಕಿ ಹಣ ಎಗರಿಸಿ ಪರಾರಿಯಾಗಿರುವ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣವನ್ನು ಮಾಲೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಳ್ಳರಿಗೆ ಶೋಧ ಕಾರ್ಯ ನಡೆಯುತ್ತಿದೆ.
ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮಾಲೂರು