ಆನೆಕಲ್

ಜಿಗಣಿಯ ಮೀನಾಕ್ಷಿ ರೆಸಾರ್ಟ್ ಬಳಿ ಗಾಂಜಾ ಜಪ್ತಿ-ಇಬ್ಬರು ಆರೋಪಿಗಳ ಬಂಧನ..!

Published

on

ಆನೇಕಲ್: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಗಣಿ ಪೋಲಿಸರು ಯಶಸ್ವಿಯಾಗಿದ್ದಾರೆ. ಕೃಷ್ಣ ಗಿರಿ ಮೂಲದ ಮುನಿರಾಜು ಅಲಿಯಾಸ್ ಸಿನ್ನಬ್ಬಯ್ಯ ಮತ್ತು ಅಸ್ಸಾಂ ಮೂಲದ ಧೀರೇನ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಸುಮಾರು 10 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆ ಸಂಜೆ ಜಿಗಣಿಯ ಮೀನಾಕ್ಷಿ ರೆಸಾರ್ಟ್ ಬಳಿ ಗಾಂಜಾ ಮಾರಾಟ ಆಗುತ್ತಿದೆ ಎಂಬಾ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ವಿಶ್ವನಾಥ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಯಿತು.ಈ ವೇಳೆ ಒಬ್ಬ ಆರೋಪಿ ಪೋಲಿಸರಿಂದ ಎಸ್ಕೇಪ್ ಆಗಿದ್ದು ಇನ್ನುಳಿದ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Click to comment

Trending

Exit mobile version