ಮದ್ದೂರು

ಬೆನ್ನಿಗೆ ಚೂರಿ ಹಾಕಿರುವವರ ಬಣ್ಣ ಜನರ ಮುಂದೆ ಬಯಲಾಗಿದೆ- ನರೇಂದ್ರಸ್ವಾಮಿ

Published

on

ಮಳವಳ್ಳಿ: ಮಳವಳ್ಳಿ ಪಟ್ಟಣದ ಹೊರವಲಯದ ರಾಗಿಬೊಮ್ಮನಹಳ್ಳಿ ಬಳಿರುವ ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ, ವಿಶ್ವಾಸ್ ಮನೆಯ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ನರೇಂದ್ರಸ್ವಾಮಿ ನನ್ನ ಚುನಾವಣೆಯಲ್ಲಿ ಹಾಗೂ ಈ ಚುನಾವಣೆಯಲ್ಲಿ ಬೆನ್ನಿಗೆ ಚೂರಿ ಹಾಕಿರುವವರ ಬಣ್ಣ ಮಳವಳ್ಳಿ ಜನರ ಮುಂದೆ ಬಯಲಾಗಿದೆ. ಎಂದು ಮಾರ್ಮಿಕವಾಗಿ ನುಡಿದರು. ಎ.ಪಿಎಂಎಸ್ ಚುನಾವಣೆ ಹಾಗೂ ತಾ.ಪಂ ಚುನಾವಣೆಯಲ್ಲಿ ಜೆಡಿಎಸ್ ನಲ್ಲಿದ್ದ ಹನುಮಂತ, ಹಾಗೂ ತಾ.ಪಂ ಸದಸ್ಯೆ ಶಿಲ್ಪಮಹೇಶ್ ರವರು ನಮ್ಮ ಕಾಂಗ್ರೇಸ್ ಪರ ನಿಂತಿರುವುದಕ್ಕೆ ಅಭಿನಂದಿಸುತ್ತೇನೆ.ಇನ್ನೂ ಕಳೆದ ಎರಡು ಚುನಾವಣೆಯಲ್ಲಿ ಕಾಣದ ಕೈ ಸಹಾಯದಿಂದ ನಮ್ಮ ಪರ ನಿಂತಿದೆ. ಜೆಡಿಎಸ್ ಪಕ್ಷದ ನಾಯಕರ ಹೆಸರು ಹೇಳದೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಪರ ಇದ್ದೇವೆ ಎಂದು ಜನರಿಗೆ ಗೊತ್ತಾಗುವಂತೆ ಮಾಡುವಂತೆ ಕಾರ್ಯಕರ್ತರಿಗೆ ಮಾಜಿ ಸಚಿವ ನರೇಂದ್ರಸ್ವಾಮಿ ರವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ದೇವರಾಜು, ಸುಂದರ್ ರಾಜ್, ಜಿ.ಪಂ ಸದಸ್ಯೆ ಸುಜಾತಪುಟ್ಟು, ತಾ.ಪಂನೂತನ ಅಧ್ಯಕ್ಷ ಪುಟ್ಟುಸ್ವಾಮಿ, ಉಪಾಧ್ಯಕ್ಷ ಮಾದು, ತಾ.ಪಂ ಕಾಂಗ್ರೆಸ್ ಪಕ್ಷದ ಸದಸ್ಯರುಗಳು, ನೂತನ ಎಪಿಎಂಸಿ ನಿರ್ದೇಶಕರುಗಳು, ಹಲವು ಮುಖಂಡರುಗಳು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version