ರಾಯಚೂರು

ಅನೈತಿಕ ತಾಣವಾಗಿದೆ ಎಪಿಎಂಸಿ ಆವರಣ..!

Published

on

ರಾಯಚೂರು: ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಬೇಕಿದ್ದ ಎಪಿಎಂಸಿ ಆವರಣ ಇಂದು ಅನೈತಿಕ ತಾಣವಾಗಿ ಮಾರ್ಪಟ್ಟು ಭಯದ ವಾತಾವರಣ ಸೃಷ್ಟಿಸಿದೆ. ಸುತ್ತಲೂ ಮುಳ್ಳು ಜಾಲಿಗಳಿಂದ ಕೂಡಿದ ಎಪಿಎಂಸಿ ಅಲ್ಲಿ ನಾಡ ಕಾರ್ಯಾಲಯ,ಹಾಗೂ ರೈತ ಸಂಪರ್ಕ ಕೇಂದ್ರ, ಎರಡು ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ. ಕತ್ತಲಾದರೆ ಸಾಕು ಮಧ್ಯ ಪ್ರಿಯರಿಗೆ,ಜೂಜು ಕೊರರಿಗೆ, ಮೊಜು ಮಸ್ತಿ ಮಾಡುವವರಿಗೆ ಸುಸರ್ಜಿತ ಸ್ಥಳವಾಗಿದೆ. ಜನ ಸಾಮಾನ್ಯರು ನಾಡ ಕಾರ್ಯಾಲಯ , ರೈತ ಸಂಪರ್ಕ ಕೇಂದ್ರಕ್ಕೆ ತೆರಳಬೇಕಾದ್ರೆ ಅಲ್ಲಲ್ಲಿ ಬಿದ್ದ ಗಾಜಿನ ಚೂರು , ಮುಳ್ಳುಗಳು ತುಳಿದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದ್ದು ಸಾರ್ವಜನಿಕಕರು ಹಿಡಿ ಶಾಪ ಹಾಕುತ್ತಾ ಸರ್ಕಾರಿ ಕಚೇರಿಗೆ ತೆರಳುವ ದುಃಸ್ಥಿತಿ ನಿರ್ಮಾಣವಾಗಿದೆ.ಆದರೂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು ಜನರು ಆಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Click to comment

Trending

Exit mobile version