ಸಿಂಧನೂರು

ದನಗಳ ಹಾವಳಿಯಿಂದ ವಾಹನ ಸವಾರರ ಪರದಾಟ..!

Published

on

ಸಿಂಧನೂರು: ಸಿಂಧನೂರು ನಗರದ ಪ್ರಮುಖ ರಸ್ತೆಗಳಲ್ಲಿ ದನಗಳ ಹಾವಳಿಯಿಂದ ವಾಹನ ಸವಾರರು ತೀವ್ರ ತೊಂದರೆ ಎದುರಿಸುತ್ತಿದ್ದರೂ.ಸಂಬಂಧಿಸಿದವರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದನಗಳು ರಸ್ತೆ ಮಧ್ಯದಲ್ಲಿ ಮಲಗಿ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದು, ಪಾದಚಾರಿಗಳು ತೊಂದೆ ಅನುಭವಿಸುವಂತಾಗಿದೆ. ಹಸುಗಳು ರಸ್ತೆ ಬದಿಯಲ್ಲಿ ವ್ಯಾಪಾರ ನಿರತ ತಳ್ಳುಗಾಡಿಗಳ ಮೇಲೂ ದಾಳಿ ನಡೆಸುತ್ತಿದ್ದು, ಇವುಗಳ ಉಪಟಳ ಸಹಿಸಲು ಅಸಾಧ್ಯವಾಗಿದೆ ಎಂಬ ದೂರು ಸಾರ್ವಜನಿಕರದ್ದಾಗಿದೆ. ಅಪಘಾತಗಳು ಸಂಭವಿಸುವ ಮುನ್ನವೇ ದನಗಳ ಮಾಲೀಕರಿಗೆ ನಗರ ಸಭೆ ಅಧಿಕಾರಿಗಳು,ದನಗಳನ್ನು ರಸ್ತೆಯಲ್ಲಿ ಬಿಡದಂತೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಾರಾ ಎನ್ನುವುದು ಕಾದು ನೋಡಬೇಕು..

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version