ಸಿಂಧನೂರು

ಯೋಗಿತಾ ಬಾಯಿ ಮೇಲೆ ನಾನು ಯಾವುದೇ ರೀತಿಯ ಹಲ್ಲೇ ನಡೆಸಿಲ್ಲ- ಶ್ರೀದೇವಿ ಶ್ರೀನಿವಾಸ್

Published

on

ಸಿಂಧನೂರು: ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಯೋಗಿತಾ ಬಾಯಿ ಮೇಲೆ ಹಲ್ಲೆ ನಡೆಸಿರುವ ವಿಚಾರವಾಗಿ ಇಂದು ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದ ಜೊತೆ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀದೇವಿ ಶ್ರೀನಿವಾಸ್ ಮಾತನಾಡಿದ್ದು ನಾನು ಯೋಗಿತಾ ಬಾಯಿ ಮೇಲೆ ಯಾವುದೇ ರೀತಿಯ ಹಲ್ಲೇ ನಡೆಸಿಲ್ಲ ನಾನು ಹಲ್ಲೇ ಮಾಡಿದ್ದರೆ ಅವರು ಯಾಕೆ ಇನ್ನೂ ದೂರು ನೀಡಿಲ್ಲ, ಅವರ ಭ್ರಷ್ಟಾಚಾರ ಹೊರಗೆ ಬರುವ ಭಯದಿಂದ ಶಾಸಕರ ಕುಮ್ಮಕ್ಕಿನಿಂದ ಈ ರೀತಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಭೋಗಾವತಿ ರವರು ನನ್ನ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುದೀಪ್ ಕುಮಾರ್ ಅಶೋಕ್, ಯೋಗಿತಾಬಾಯಿ ರನ್ನು ವಿಚಾರಣೆ ಮಾಡಿ ವರದಿ ಪಡೆದಿದ್ದಾರೆ. ಯಾರೇ ಬಂದರೂ ನನ್ನ ಕಛೇರಿಯಲ್ಲಿ ಬಹಿರಂಗ ಚರ್ಚೆಗೆ ನಾನು ಸದಾ ಸಿದ್ಧ ಎಂದು ತಿಳಿಸಿದರು

Click to comment

Trending

Exit mobile version