ಮುಳಬಾಗಿಲು; ಹಲವು ವರ್ಷಗಳಿಂದ ವಿತರಣೆ ಇಲ್ಲದ ಸಾಗುವಳಿ ಚೀಟಿಗೆ ಇಂದು ಸಚಿವರು ರೈತರಿಗೆ ವಿತರಣೆ ಮಾಡಿದರು. ಮುಳಬಾಗಿಲು ತಾಲ್ಲೂಕು ಕಛೇರಿ ಯಲ್ಲಿ ಶ್ರೀ ಹೆಚ್ ನಾಗೇಶ್, ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಚಹಳ್ಳಿ ಗ್ರಾಮದ ರೈತರಿಗೆ ಸಾಗುವಳಿ ಚೀಟಿಗಳನ್ನು ನೀಡಿದರು.ತಾಲ್ಲೂಕಿನಲ್ಲಿ ಸುಮಾರು 25 ವರ್ಷಗಳಿಂದ ನೆನೆಗುದಿಗೆ ಬಿದ್ದಿಂತಹ ಸಾಗುವಳಿ ಚೀಟಿಗಳ ವಿತರಣೆಯನ್ನು ಸಚಿವರು ಇಂದು ನೆರವೇರಿಸಿದರು.25 ಚೀಟಿಗಳು ತಯಾರಾಗಿದ್ದು 10 ರೈತರಿಗೆ ವಿತರಿಸಲಾಯಿತು..
ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರಸ್ ಟಿವಿ ಮುಳಬಾಗಿಲು