ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಬ್ಯಾಂಕ್ನ ಪರವಾನಿಗೆ ರದ್ದು ಪಡಿಸಿದ್ದು 99ರಷ್ಟು ಗ್ರಾಹಕರ ಠೇವಣಿ ವಾಪಸ್ ಸಿಗುವ ಭರವಸೆ ನೀಡಿದೆ. ಸಾಕಷ್ಟು ಬಂಡವಾಳ ಮತ್ತು ಗಳಿಸುವ ನಿರೀಕ್ಷೆ ಇಲ್ಲದಿದ್ದರೂ ಆರ್ಥಿಕ ಚಟುವಟಿಕೆ ನಡೆಸುತ್ತಿದ್ದ ದಿ. ಕರಾಡ್ ಜನತಾ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ಆರ್ಬಿಐ ರದ್ದುಪಡಿಸಿದೆ. ಅಲ್ಲದೆ ಎಲ್ಲ ವ್ಯವಹಾರಗಳನ್ನು ಕೊನೆಗೊಳಿಸುವಂತೆ ಸೂಚನೆ ನೀಡಿದೆ. ಮಹಾರಾಷ್ಟ್ರದ ಕರಾಡ್ ಮೂಲದ ಈ ಸಹಕಾರಿ ಬ್ಯಾಂಕ್ 1917ರಿಂದ ಸೇವೆ ಆರಂಭಿಸಿತ್ತು. ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕ್ ನಡೆಸಲು ಅಗತ್ಯ ಪ್ರಮಾಣದ ಬಂಡವಾಳದ ಕೊರತೆ ಎದುರಿಸುತ್ತಿತ್ತು. ಇದೀಗ ಬ್ಯಾಂಕ್ ಪರವಾನಗಿ ರದ್ದಾಗಿದ್ದು ಆತಂಕಗೊಂಡಿದ್ದ ಗ್ರಾಹಕರಿಗೆ ಆರ್ಬಿಐ ಭರವಸೆ ನೀಡಿದೆ.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು