ಬಾಲಿವುಡ್ ನ ಖ್ಯಾತ ನಟಿ ಪದೇ ಪದೇ ಒಂದಲ್ಲ ಒಂದು ವಿವಾದಗಳನ್ನು ತನ್ನ ಮೈಮೇಲೆ ಎಳೆದು ಕೊಳ್ತಾನೆ ಇರ್ತಾರೆ. ಇತ್ತೀಚೆಗೆ ತನ್ನ ಮಾಜಿ ಪ್ರಿಯಕರ ಹೃತಿಕ್ ರೋಷನ್ ನನ್ನು ಮತ್ತೇ ಕೆಣಕಿ ಹೃತಿಕ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕಂಗನಾ ರನೌತ್ ಮತ್ತು ದಿಲ್ಜಿತ್ ದೊಸಾಂಜ್ ನಡುವಿನ ದೆಹಲಿ ಚಲೋ ಪರ-ವಿರೋಧದ ಗಲಾಟೆ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ನೂತನ ಕೃಷಿ ಕಾಯ್ದೆಯ ಬಗ್ಗೆ ಇಬ್ಬರು ಟ್ವೀಟ್ಟರ್ ನಲ್ಲಿ ವಾಗ್ವಾದವನ್ನು ಮುಂದುವರೆಸಿದ್ದಾರೆ.
ದೆಹಲಿ ಚಲೋಗೆ ಬೆಂಬಲ ಘೋಷಿಸಿ ಸುಮಾರು ಒಂದು ಕೋಟಿ ರೂಪಾಯಿಯನ್ನು ದಿಲ್ಜಿತ್ ದೊಸೊಂಜ್ ದಾನ ಮಾಡಿದ್ದರು. ಪಂಚಾಬ್ ರೈತರ ಪರ ಧ್ವನಿ ಎತ್ತಿದ್ದ ದಿಲ್ಜಿತ್ ಕಂಗನಾ ವಿರುದ್ದ ಗುಡುಗಿದ್ದರು. ನೂತನ ಖಾಯ್ದೆ ವಿರುದ್ದ ಸರಣಿ ಟ್ವೀಟ್ ಮಾಡುತ್ತೀರುವ ಕಂಗನಾರನೌತ್ ನನ್ನು ಚಳುವಳೀಯಿಂದ ಕಾಣೆಯಾಗಿದ್ದಾರೆಂದು ದಿಲ್ಜಿತ್ ಟ್ವೀಟ್ ಮಾಡಿದ್ದರು. ಆದ್ರೆ ಇದೀಗ ಕಂಗನಾ ದಿಲ್ಜಿತ್ ಪ್ರತಿಭಟನೆಯ ಅಂಗಳದಿಂದ ನಾಪತ್ತೆಯಾಗಿದ್ದಾರೆಂದು ಕಾಲೆಳೆದಿದ್ದಾರೆ. ದಿಲ್ಜಿತ್ ಜೀ ದಯವಿಟ್ಟು ನೂತನ ಕೃಷಿ ಕಾಯ್ದೆ ಗಳಲ್ಲಿ ನೀವು ಇಷ್ಟಪಡದ ಅಂಶ ಯಾವುದೆಂದು ಹೇಳಬಹುದೆ ಎಂದು ಕಂಗನಾ ಪ್ರಶ್ನಿಸಿದ್ದಾರೆ. ನೀವು ದೇಶದಲ್ಲಿ ಎಲ್ಲಿ ಬೇಕಾದರೂ ಕಾರ್ಯಕ್ರಮ ನೀಡಿ ಹಣಗಳಿಸುವಂತೆ ರೈತರು ಎಲ್ಲಿ ಬೇಕಾದರೂ ಬೆಳೆ ಮಾರಿ ಹಗಳಿಸುವ ಅವಕಾಶ ನೀಡಿದ್ದು ನನಗೆ ಇಷ್ಟವಾಯಿತು. ಈ ಕಾಯ್ದೆಗಳಿಂದ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ ದಯವಿಟ್ಟು ನೀವು ವಿರೋಧಿಸುವ ಅಂಶಗಳು ಏನೆಂದು ತಿಳಿಸಿ ಎಂದು ದಿಲ್ಜಿತ್ ಗೆ ಕಂಗಾನ ಟ್ವೀಟರ್ ನಲ್ಲಿ ಪ್ರಶ್ನೆಯ ಸುರಿಮಳೆಯನ್ನೇ ಸುರಿಸಿದ್ದಾರೆ.
ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು