ಯಾರೋ ಕೆಲವು ಮಂದಿ ನೀರಾವರಿ ಹೋರಾಟಗಾರರ ಮಾತು ಕೇಳಿಕೊಂಡು ಹೊನ್ನವಳ್ಳಿ ಭಾಗದ ಜನರು ಚುನಾವಣೆ ಬಹಿಷ್ಕಾರ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಬಳ್ಳೆಕಟ್ಟೆ ಸುರೇಶ್ ಕಿಡಿಕಾರಿದ್ದಾರೆ.ಇನ್ನೂ ಬಿಜೆಪಿ ಮುಖಂಡ ಗಂಗರಾಜು ಮಾತನಾಡಿ ಕೆಲವು ನೀರಾವರಿ ಹೋರಾಟಗಾರರು ತಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.ಹೋರಾಟಗಾರರ ಮಾತುಕೇಳಿ ಚುನಾವಣಾ ಬಹಿಷ್ಕರಿಸಿರುವುದು ಮಹಾ ಅಪರಾಧವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಜೊತೆಗೆ ಎಪಿಎಂಸಿ ಅಧ್ಯಕ್ಷರಾದ ದಿವಾಕರ್ ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳಿಗೂ ನೀರು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು