ಅರಸೀಕೆರೆ: ಅರಸೀಕೆರೆಯಲ್ಲಿ ನಗರ ಪೋಲಿಸ್ ಠಾಣೇಯ ಮುಖ್ಯಪೇದೆ ಜೇನುಕಲ್ ಗೌಡ ಎಂಬಾತ ರಾಜರೋಷವಾಗಿ ಲಂಚ ಸ್ವೀಕರಿಸುತ್ತಿರುವ ವಿಡೀಯೊ ಇದೀಗ ಇಲ್ಲೇಡೆ ವೈರಲ್ ಆಗುತ್ತಲಿದೆ.ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕಾಗಿ ಹೋರಾಡ್ತಾಯಿದ್ರೆ ಇತ್ತ ಜನಗಳಿಗೆ ರಕ್ಷಣೆ ನೀಡಬೇಕಾದಂತಹ ಕೆಲ ಅಧಿಕಾರಿಗಳೇ ಲಂಚ ಸ್ವೀಕರಿಸುತ್ತಿದ್ದಾರೆ. ಈ ರೀತಿಯ ಕೆಲವು ಅಧಿಕಾರಿಗಳಿಂದ ನಿಷ್ಠಾವಂತ ಅಧಿಕಾರಿಗಳಿಗೂ ರೋಲ್ ಕಾಲ್ ಪಟ್ಟ ಬರುವಂತಾಗಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುತ್ತಾರ ಎಂದು ಕಾದು ನೋಡಬೇಕಾಗಿದೆ.
ವರದಿ- ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ