ಬೆಂಗಳೂರು: ನಿಮ್ಮ ಋಣದಲ್ಲಿ ನಾನಿಲ್ಲ, ಆದರೆ ನನ್ನ ಋಣದಲ್ಲಿ ನೀವಿದ್ದೀರಾ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಿದ್ದರಾಮಾಯ್ಯ ವಿರುದ್ದ ಕಿಡಿಕಾರಿದರು. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ, ನಾನು ಅವರ ಋಣದಲ್ಲಿ ಇಲ್ಲ ಆದರೆ ನನ್ನ ಋಣದಲ್ಲಿ ಸಿದ್ದರಾಮಯ್ಯ ಇದ್ದಾರೆ.ಅವರು ಡಿಸಿಎಂ ಆಗುವಾಗ ನನ್ನ ಕೊಡುಗೆ ಅಪಾರವಾಗಿದೆ. 2004 ರಲ್ಲಿ ಡಿಸಿಎಂ ಆಗುವಲ್ಲಿ ನನ್ನ ಪಾಲಿದೆ,58 ಸ್ಥಾನದಲ್ಲಿ ಗೆಲ್ಲಬೇಕಾದರೆ ನನ್ನ ಪಾಲಿದೆ. ಪ್ರತೀ ದಿನ 700, 800 ಕಿಲೋ ಮೀಟರ್ ಸಂಚರಿಸಿ ಜನರ ಸಂಘಟನೆ ಮಾಡಿದ್ದೇನೆ.ಆರ್ಥಿಕವಾಗಿಯೂ ಸಹಕಾರ ನೀಡಿದ್ದೇನೆ. ಈ ಕಾರಣಕ್ಕಾಗಿ ಸಿದ್ದರಾಮಯ್ಯ ನನ್ನ ಋಣದಲ್ಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ವಿಲೀನ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ನಿಲುವನ್ನು ಹಲವಾರು ಬಾರಿ ಮುಕ್ತವಾಗಿ ಹೇಳಿದ್ದೇನೆ. ನಾನು ಬದುಕಿರುವರೆಗೆ ಯಾವುದೇ ಪಕ್ಷದ ಜೊತೆಗೆ ವಿಲೀನ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು