ಬಾಲಿವುಡ್ ನ ಖ್ಯಾತ ನಟ ಸೊನುಸೂದ್ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು ರಿಯಲ್ ಲೈಫ್ ನಲ್ಲಿ ಮಾತ್ರ ಸಹೃದಯ ವ್ಯಕ್ತಿ. ಇತ ಸದಾ ಸಂಕಷ್ಟದಲ್ಲಿರುವವರಿಗೆ ತನ್ನಕೈಲಾದಂತಹ ಸಹಾಯ ಮಾಡಿಕೊಂಡು ಅವರಿಗೆ ಇದುವರೆಗೂ ಬೆನ್ನೇಲುಬಾಗಿ ನಿಲ್ಲುತ್ತಾ ಬಂದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೊಟ್ಯಾಂತರ ಜನ್ರು ತಮ್ಮ ತಮ್ಮ ಊರುಗಳಿಗೆ ತೆರಳಳು ಬಸ್ಸ್ ಗಳಿಲ್ಲದೆ ಪರದಾಡುತ್ತಿರುವ ಸಂದರ್ಭದಲ್ಲಿ ಪ್ರತಿಯೊಂದು ಹಳ್ಳಿಗೂ ಸಾವಿರಾರು ಸಂಖ್ಯೆಯಲ್ಲಿ ಬಸ್ ಗಳ ವ್ಯವಸ್ಥೆಯನ್ನು ನಟ ಸೋನುಸೂದ್ ಮಾಡಿದ್ದರು. ಹೀಗೆ ಒಂದಲ್ಲ ಒಂದು ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಸೋನುಸೂದ್ ಗೆ ತೆಲಂಗಾಣದಲ್ಲಿ ಜನರು ದೇವಾಸ್ಥಾನವನ್ನು ಕಟ್ಟಿದ್ದಾರೆ.ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ದುಬ್ಬಾ ತಾಂಡ ಗ್ರಾಮದಲ್ಲಿ ಸೋನು ಹೆಸರಲ್ಲಿ ದೇವಸ್ಥಾನ ಕಟ್ಟಿಸಲಾಗಿದೆ. ಕಳೆದ ಭಾನುವಾರ ಡಿಸೆಂಬರ್.20 ರಂದು ಅದರ ಉದ್ಘಾಟನೆ ಕೂಡ ನೆರವೇರಿದೆ. ಲಾಕ್ಡೌನ್ ಸಮಯದಲ್ಲಿ ಮಾಡಿದ ಸಹಾಯ, ಕಷ್ಟದಲ್ಲಿ ಇರುವವರಿಗೆ ನೀಡುತ್ತಿರುವ ನೆರವು, ಅವರ ಮಾನವೀಯ ಗುಣ ಇದನ್ನೆಲ್ಲ ಗಮನದಲ್ಲಿಟ್ಟು ಕೊಂಡು, ಊರಿನ ಗ್ರಾಮಸ್ಥರು ಸೋನು ಹೆಸರಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ.’ಇಂತಹದ್ದೊಂದು ಕಠಿಣ ಸಂದರ್ಭದಲ್ಲೂ ಸೋನು ಸೂದ್ ಹಲವು ಮಂದಿಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಅವರಿಗೆ ಗೌರವ ನೀಡುವ ಸಲುವಾಗಿ ನಮ್ಮ ಗ್ರಾಮದಲ್ಲಿ ಈ ದೇವಸ್ಥಾನ ಕಟ್ಟಿಸಿದ್ದೇವೆ’ಎಂಬವುದು ದುಬ್ಬಾ ತಾಂಡದ ಗ್ರಾಮಸ್ಥರ ಮಾತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಸೋನು ಸೂದ್, ‘ಇದು ನಿಜಕ್ಕೂ ಬಹಳ ದೊಡ್ಡದಾದ ಕ್ಷಣವಾಗಿದೆ. ಆದರೆ, ನಾನೇನು ಸಾಧನೆ ಮಾಡಿಲ್ಲ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಸಹೋದರ, ಸಹೋದರಿಯರಿಗೆ ಸಹಾಯ ಮಾಡುವಂತೆ ನಾನು ಮಾಡಿದ್ದೇನೆ ಅಷ್ಟೇ’ ಎಂದಿದ್ದಾರೆ.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು