ಸಿನಿಮಾ

ಬೈಕ್ನಲ್ಲಿ ಕೇರಳ ಟ್ರಿಪ್ ಮುಗಿಸಿಕೊಂಡು ಬಂದ ನಟ ದರ್ಶನ್ & ಫ್ರೆಂಡ್ಸ್..!

Published

on

ಸ್ಯಾಂಡಲ್ ವುಡ್ ನಲ್ಲಿ ಬಾರಿ ಕುತೂಹಲ ಮೂಡಿಸಿರುವಂತವಹ ರಾಬರ್ಟ್ ಚಿತ್ರ ಸದ್ಯವದಲ್ಲೇ ತೆರೆಮೇಲೆ ಬಂದು ಸಿನಿಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಇಷ್ಟುದಿನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ನಟ ದರ್ಶನ್ ಇದೀಗ ಬಿಡುವು ಮಾಡಿಕೊಂಡು ಕನ್ನಡ ಚಿತ್ರರಂಗದ ಕೆಲ ನಟರೊಂದಿಗೆ 2 ದಿನದ ಮಟ್ಟಿಗೆ ಕೇರಳಕ್ಕೆ ಬೈಕ್ ನಲ್ಲಿ ಜಾಲಿರೈಡ್ ಹೋಗಿದ್ದರು. ಇದೀಗ ದರ್ಶನ್ ಮತ್ತು ಫ್ರೆಂಡ್ಸ್ ವಾಪಸ್ ಆಗಿದ್ದಾರೆ. ದರ್ಶನ್ ಜೊತೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಯಶಸ್, ಪನ್ನಗ ಭರಣ ಸೇರಿದಂತೆ 15ಕ್ಕೂ ಅಧಿಕ ಜನರು ಬೈಕ್ ನಲ್ಲಿ ಟ್ರಿಪ್ ಹೊಗಿದ್ದರು. ಈ ಮೊದಲು ಮಡಿಕೇರಿಗೆ ಹೋಗಿಬಂದಿದ್ದ ಈ ಬಳಗ, ಈಗ ಕೇರಳದ ಸುಂದರ ತಾಣಗಳನ್ನು ನೋಡಿಕೊಂಡು ಬಂದಿದೆ. ದರ್ಶನ್ ಅವರ ತಂಡ ಕೇರಳದಿಂದ ಮೈಸೂರಿಗೆ ಗುಂಡ್ಲುಪೇಟೆ ಮಾರ್ಗವಾಗಿ ವಾಪಸ್ ಆಗಿದೆ. ಇದೇ ಮಾರ್ಗವಾಗಿ ಬರುತ್ತಾರೆ ಎಂದು ಖಚಿತ ಮಾಹಿತಿ ಪಡೆದ ಗುಂಡ್ಲುಪೇಟೆ ಪೊಲೀಸ್ ಸಿಬ್ಬಂದಿ, ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮೀಪದ ತಗ್ಗಲೂರು ಗೇಟ್ ಬಳಿ ತಂಡವನ್ನು ನಿಲ್ಲಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ದರ್ಶನ್ ಮಾತ್ರವಲ್ಲದೆ, ಚಿಕ್ಕಣ್ಣ ಜೊತೆಗೂ ಫೋಟೋ ತೆಗೆಸಿಕೊಂಡಿದ್ದಾರೆ ಪೊಲೀಸ್ ಸಿಬ್ಬಂದಿ. ಸಾಮಾನ್ಯವಾಗಿ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫೋಟೋಗಳನ್ನು ಅಪ್ಲೋಡ್ ಮಾಡುವುದಿಲ್ಲ. ಆಗಾಗ ಪ್ರೊಫೈಲ್ ಪಿಕ್ಚರ್ ಚೇಂಜ್ ಮಾಡುತ್ತಿರುತ್ತಾರೆ. ಆದರೆ, ಇದೀಗ ಕೇರಳ ಟ್ರಿಪ್ ಮುಗಿಸಿಕೊಂಡು ಬಂದಿರುವ ಅವರು, ನಾಲ್ಕು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಆ ಫೋಟೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version