ಸಿನಿಮಾ

ಬೆಲ್ ಬಾಟಂ ಯಶಸ್ಸಿನ ನಂತರ ಮತ್ತೊಮ್ಮೆ ನಿರ್ದೇಶನಕ್ಕೆ ಮುಂದಾದ ಜಯತೀರ್ಥ..!

Published

on

ಸ್ಯಾಂಡಲ್ ವುಡ್ ನಲ್ಲಿ 2019 ರಲ್ಲಿ ತೆರೆಕಂಡಂತಹ ಚಿತ್ರ ಬೆಲ್ ಬಾಟಂ. ಈ ಚಿತ್ರ ಸಿನಿಪ್ರೇಕ್ಷಕರು ಇಟ್ಟುಕೊಂಡಿದ್ದ ನಿರೀಕ್ಷೆ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ದೂಳೆಬ್ಬಿಸಿತ್ತ. ಇನ್ನೂ ಈ ಚಿತ್ರವನ್ನು ಜಯತಿರ್ಥ ನಿರ್ದೇಶನ ಮಾಡಿದ್ದು ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿದ್ದರು.ಇದೀಗ ಬೆಲ್ ಬಾಟಂ ಚಿತ್ರದ ನಿರ್ದೆಶಕರಾದ ಜಯತಿರ್ಥರವರು ಒಂದು ಹೊಸ ಪ್ರಯೋಗಾತ್ಮಕ ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆ ಸೃಷ್ಟಿ ಆಗಿದೆ. ಜಯತಿರ್ಥ ನಿರ್ದೇಶನ ಮಾಡಲಿರುವ ಕಥೆಗೆ ಕಲಾವಿದರ ಆಯ್ಕೆ ಆಗಿದ್ದು, ರಿಷಿ ಮತ್ತು ರಂಜನಿರಾಘವನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಈ ಮೊದಲು’ಪುಟ್ಟ ಗೌರಿ ಮದುವೆ’ ಸೀರಿಯಲ್ ಮೂಲಕ ಅಪಾರ ಖ್ಯಾತಿಗಳಿಸಿದ್ದ ರಂಜನಿ ರಾಘವನ್ ಈಗ ‘ಕನ್ನಡತಿ’ಧಾರಾವಾಹಿ ಮೂಲಕ ಮಿಂಚುತ್ತಿದ್ದಾರೆ. ಅದರ ಜೊತೆಗೆ ಅವರಿಗೆ ಸಿನಿಮಾಗಳಿಂದಲೂ ಒಳ್ಳೊಳ್ಳೆಯ ಆಫರ್ಗಳು ಹರಿದುಬರುತ್ತಿದೆ. ಈಗ ಖ್ಯಾತ ನಿರ್ದೇಶಕ ಜಯತೀರ್ಥ ಜೊತೆ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದೆ.’ಆಪರೇಷನ್ ಅಲಮೇಲಮ್ಮ. ‘ಕವಲುದಾರಿ’ಮುಂತಾದ ಸಿನಿಮಾಗಳ ಮೂಲಕ ಜನಮನ ಗೆದ್ದಿರುವ ನಟ ರಿಷಿ ಅವರು ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಈ ಹಿಂದೆ ಸುದ್ದಿ ಆಗಿತ್ತು ಅದೀಗ ಖಚಿತ ಆಗಿದೆ.ವಿಶೇಷವೆಂದರೆ ಅವರು ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಕೆಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ.ಪೊಲೀಸ್ ಅಧಿಕಾರಿ ಗೆಟಪ್ನಲ್ಲಿ ಅವರು ನಟಿಸುತ್ತಿರುವ ಕೆಲವು ಫೋಟೋಗಳನ್ನು ನಿರ್ದೇಶಕ ಜಯತೀರ್ಥ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪವನ್ ಕುಮಾರ್, ಶಶಾಂಕ್,ಯೋಗರಾಜ್ ಭಟ್,ಕೆ.ಎಂ.ಚೈತನ್ಯ ಅವರು ಜೊತೆಯಾಗಿ ಈ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಈ ಐದು ಜನ ಪ್ರತಿಭಾವಂತ ನಿರ್ದೇಶಕರ ಸಂಗಮದಲ್ಲಿ ಈ ಸಿನಿಮಾ ಮೂಡಿಬರಲಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version