Uncategorized

ಮನೆಯಂಗಳದ ಮಾತುಕತೆ ತಿಂಗಳ ಅತಿಥಿಯಾಗಿ ಶಿವಣ್ಣ ಇಜೇರಿ..!

Published

on

ಶಹಾಪುರ: ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮನೆಯಂಗಳದ ಮಾತುಕತೆ ತಿಂಗಳ ಅತಿಥಿಯಾಗಿ ನಗರದ ಹಿರಿಯ ಸಾಹಿತಿಗಳು ಹಾಗೂ ಶರಣ ಚಿಂತಕರಾದ ಶಿವಣ್ಣ ಇಜೇರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಸಿನ್ನೂರ ತಿಳಿಸಿದ್ದಾರೆ.ಶುಕ್ರವಾರ ಸಾಯಂಕಾಲ 6 ಗಂಟೆಗೆ ಕುಂಬಾರ ಓಣಿಯ ಶಿವಣ್ಣ ಇಜೇರಿ ಅವರ ಕಾಯಕ ನಿವಾಸದಲ್ಲಿ ಹಮ್ಮಿಕೊಂಡಿರುವ ಮನೆಯಂಗಳದ ಮಾತುಕತೆ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರ ಹಾಗೂ ಡಾ. ಗೋವಿಂದರಾಜ ಆಲ್ದಾಳ ಆಗಮಿಸಲಿದ್ದಾರೆಂದು ತಿಳಿಸಿದರು.ನಂತರ ಜರುಗುವ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ರವಿಂದ್ರನಾಥ ಹೊಸ್ಮನಿ,ಸಿ.ಎಸ್.ಭೀಮರಾಯ ಮಲ್ಲಿಕಾರ್ಜುನ್ ಅವಂಟಿ, ಪಂಚಾಕ್ಷರಿ ಹಿರೇಮಠ, ಭಾಗವಹಿಸಲಿದ್ದಾರೆ.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version