Uncategorized

ಗುಂಡು ತುಂಡುಗೆ ಮತ ಮಾರಿಕೊಳ್ಳಬೇಡಿ -ಸಿಪಿಐ ಉಮೇಶ್ ..!

Published

on

ಮೊಳಕಾಲ್ಮುರು: ಮೊಳಕಾಲ್ಮುರು ತಾಲ್ಲೂಕಿನ ಪೊಲೀಸ್ ಅಧಿಕಾರಿಯಾದ ಸಿಪಿಐ ಉಮೇಶ್ ಅವರು ಎಸ್ಪಿ ರಾಧಿಕಾ ಅವರ ನಿರ್ದೇಶನ ಮೇರೆಗೆ ಇಂದು ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಹೋಗಿ ಪಥ ಸಂಚಲನ ಮೂಲಕ ಮತದಾನದ ಮಹತ್ವದ ಬಗ್ಗೆ ತಿಳಿಸಿದರು. ಯಾರಿಗೂ ಹೆದರದೆ ನಿಮ್ಮ ಅಭ್ಯರ್ಥಿಗೆ ಮತ ಚಲಾಯಿಸಿ,ಬುನಾದಿ ಬಿಗಿ ಇದ್ದರೆ ಮಾತ್ರ ಮನೆಯ ಕಟ್ಟಡ ಸರಿ ಇರುವುದು ಇದನ್ನು ಅರಿತು ಗುಂಡು-ತುಂಡು ಹಂಚುವ ಅಭ್ಯರ್ಥಿಯಿಂದಾ ದೂರವಿರಿ, ಹಿಂದಿನ ದಿನಗಳಲ್ಲಿ ಇದ್ದಂತಹರವರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಇವತ್ತು ಡಾ.ಬಿ.ಆರ್ ಅಂಬೇಡ್ಕರ್,ಮಹಾತ್ಮಾ ಗಾಂಧೀಜಿ ಅವರ ಹೋರಾಟದ ಫಲ ಪ್ರತಿಯೊಬ್ಬ ನಾಗರಿಕನಿಗೂ ದೊರೆತಿದೆ. ಇದನ್ನು ಸದುಪಯೋಗ ಪಡೆಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು. ಇನ್ನೂಈ ಸಂದರ್ಭದಲ್ಲಿ ಪಿಎಸ್ಐ ಬಸವರಾಜ್,ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ- ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Click to comment

Trending

Exit mobile version