ಕನ್ನಡ ಚಿತ್ರರಂಗದಲ್ಲಿ ತನ್ನ ಹಾಡಿನ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಎಸ್ ಪಿ ಬಾಲಸುಬ್ರಮಣ್ಯಂ ಅನಾರೋಗ್ಯದ ಕಾರಣದಿಂದ ಕೆಲತಿಂಗಳ ಹಿಂದೆಯಷ್ಟೇ ನಮ್ಮನ್ನೇಲ್ಲಾ ಅಗಲಿದರು. ಇವರ ಸಾವಿನ ಸುದ್ದಿ ಇಡೀ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದ್ದು ಸುಳ್ಳಲ್ಲ. ಇದೀಗ ಪುದುಚೇರಿಯ ಮಿಷನ್ ಸ್ಟ್ರೀಟ್ ನಲ್ಲಿರುವ ಅಂಗಡಿಯಲ್ಲಿ ದಿವಂಗತ ಎಸ್ ಪಿಬಿ ರವರ 5.8 ಅಡಿಎತ್ತರ ಹಾಗೂ 339ಕೆ.ಜಿ ತೂಕದ ಚಾಕೊಲೇಟ್ ಪ್ರತಿಮೆಯನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದ. ಇನ್ನೂ ಈ ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕೊಲೇಟ್ ನಿಂದಲೇ ಮಾಡಲಾಗಿದ್ದು, ಈ ಕ್ರಿಸ್ಮಸ್ ಮತ್ತು ಹೊಸ ವರ್ಷ ಸೀಸನ್ ನಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅಂಗಡಿ ಮಾಲೀಕರು ಈ ಪ್ರತಿಮೆಯ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಇನ್ನೂ ಈ ಚಾಕೊಲೇಟ್ ಪ್ರತಿಮೆಯನ್ನು ರಾಜೇಂದ್ರನ್ ಎಂಬುವವರು ತಯಾರಿಸಿದ್ದು, ಇದನ್ನು ಜನವರಿ 3 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆಯಂತೆ. ಈ ಹಿಂದೆ ಅಂಗಡಿಯಲ್ಲಿ ಎ ಪಿ ಜೆ ಅಬ್ದುಲ್ ಕಲಾಂ, ಚಲನಚಿತ್ರ ನಟ ರಜನಿಕಾಂತ್ ಅಲ್ಲದೆ ಕೆಲ ಕ್ರಿಕೆಟಿಗರ ಚಾಕೊಲೇಟ್ ಪ್ರತಿಮೆಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಆದ್ರೆ ಈ ಬಾರಿ ಸಂಗೀತಾ ಮಾಂತ್ರಿಕ ಎಸ್ ಪಿಬಿಯವರ ಪ್ರತಿಮೆ ಮಾಡಿರುವುದು ಅಭಿಮಾನಿಗಳಲ್ಲಿ ಸಂತೋಷ ತಂದಿದೆ.
ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು