Uncategorized

ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಪುನರುತ್ಥಾನ ಕ್ರೈಸ್ತರ ದೇವಾಲಯಕ್ಕೆ ಭೇಟಿ ನೀಡಿದ ಎನ್ ಬೋಸರಾಜ್..!

Published

on

ಸಿರವಾರ: ಇಂದು ನಾಡಿನಾದ್ಯಂತ ಕ್ರಿಸ್ ಮಸ್ ಹಬ್ಬದ ಸಂಭ್ರಮ ಸಡಗರ, ಕ್ರಿಸ್ ಮಸ್ ಹಬ್ಬದ ಸಲುವಾಗಿ ಇಂದು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿರುವ ಪುನರುತ್ಥಾನ ಕ್ರೈಸ್ತ ರ ದೇವಾಲಯಕ್ಕೆ ರಾಯಚೂರು ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್ ಬೋಸರಾಜ್, ಹಾಗೂ ಮಾಜಿ ವಿಧಾನ ಸಭಾ ಸದಸ್ಯರಾದ ಹಂಪಯ್ಯ ಸಾಹುಕಾರ , ಜಿಲ್ಲಾ ಪಂಚಾಯತ್ ಸದಸ್ಯ ಕಿರಿಲಿಂಗಪ್ಪ ಭೇಟಿ ನೀಡಿದರು. ಇನ್ನೂ ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ಬೋಸರಾಜ್ ಕಳೆದ 25 ವರ್ಷಗಳಿಂದ ನಾನು ಕ್ರಿಸ್ ಮಸ್ ಹಬ್ಬಕ್ಕೆ ಕವಿತಾಳದ ಪುನರುತ್ಥಾನ ಕ್ರೈಸ್ತರ ದೇವಾಲಯಕ್ಕೆ ಭೇಟಿ ನೀಡುತ್ತ ಬಂದಿದ್ದೇನೆ. ಕ್ರಿಸ್ ಮಸ್ ಈ ಪದದಲ್ಲೇ ಸಂಭ್ರಮವಿದೆ ವರ್ಷದ ಕೊನೆಯಲ್ಲಿ ಬರುವ ದೊಡ್ಡ ಹಬ್ಬ ಜಗತ್ತಿಗೆ ಶಾಂತಿ, ಸಹಬಾಳ್ವೆ, ಪ್ರೀತಿಯ ಜೀವನ ಸಂದೇಶ ಸಾರಿದ ಶಾಂತಿದೂತ ಯೇಸು ಕ್ರಿಸ್ತ ಜನ್ಮದಿನವನ್ನು ಸಂತೋಷ ಎಲ್ಲಾ ಕಡೆ ಹರಡಲಿ ಎಂದು ನಾಡಿನ ಜನತೆಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಫಾದರ್ ವಿಜಯ ಕುಮಾರ ಕ್ರೈಸ್ತ ಬಾಂಧವರು ತಮ್ಮ ಮನೆಗಳಲ್ಲಿ ಹೊಸ ಉಡುಗೆಗಳನ್ನು ತೊಟ್ಟು,ಮನೆಯಲ್ಲಿ ದೀಪಾಲಂಕಾರ ಮಾಡಿ ,ಕ್ರೀಸ್ ಮಸ್ ಟ್ರಿಗಳಿಗೆ ಅಲಂಕಾರ ಮಾಡಿ ಕೇಕ್ ಮತ್ತು ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಸವಿಯುವ ಮೂಲಕ ಸಂಭ್ರಮಿಸುವರು ಎಂದು ತಿಳಿಸಿದರು.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Click to comment

Trending

Exit mobile version