Uncategorized

ಮತದಾರರಿಗೆ ಕುಕ್ಕರ್ ಆಮಿಷ- ತಹಶೀಲ್ದಾರ್ ರಾಜಶೇಖರ್ ನೇತೃತ್ವದಲ್ಲಿ ದಾಳಿ..!

Published

on

ಮುಳಬಾಗಿಲು: ಕೋಲಾರದಲ್ಲಿ ಗ್ರಾ.ಪಂ 2 ನೇ ಹಂತದ ಚುನಾವಣೆಗೆ ಮತದಾನ ಮಾಡುವವರಿಗೆ ಹಂಚಲು ತಂದಿದ್ದ 48 ಕುಕ್ಕರ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ತಾಯಲೂರಿನಲ್ಲಿ ನಡೆದಿದೆ.ಇನ್ನೂ ಕುಕ್ಕರ್ ಹಂಚುತ್ತಿರುವ ಖಚಿತ ಮಾಹಿತಿ ಪಡೆದುಕೊಂಡು ತಹಶೀಲ್ದಾರ್ ರಾಜಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕೆ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು,ಮತದಾರರಿಗೆ ಆಮಿಷ ಒಡ್ಡುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದ್ರೂ ಇದಕ್ಕೆ ಕ್ಯಾರೆ ಅನ್ನದ ಅಭ್ಯರ್ಥಿಗಳು ಮಾತ್ರ ಮತದಾರರಿಗೆ, ಎಣ್ಣೆ, ಚಿನ್ನ, ಮಾಂಸದ ಆಮಿಷಗಳನ್ನು ಒಡ್ಡುತ್ತಲೆ ಇದ್ದಾರೆ.

ವರದಿ- ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Click to comment

Trending

Exit mobile version