Uncategorized

ಭಂಡಾರೆಪ್ಪ ನಾಟೇಕಾರಗೆ ಸಮಾಜ ಸೇವಾ ಪ್ರಶಸ್ತಿ..!

Published

on

ಶಹಾಪುರ: ನಗರದ ಸಮಾಜ ಸೇವಕರು, ಕೋಲಿ ಸಮಾಜದ ಯುವ ಮುಖಂಡರು ಹಾಗೂ ಡಿ. ಕೆ.ಶಿವಕುಮಾರ್ ಅಭಿಮಾನಿ ಬಳಗದ ರಾಜ್ಯ ಕಾರ್ಯದರ್ಶಿಗಳಾದ ಬಂಡಾರೆಪ್ಪ ನಾಟೇಕರ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸಂಗೀತೋತ್ಸವ ಹಾಗೂ ನಾಡಿನ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಶ್ರಿವಿದ್ಯಾ ಮಹಾಸಂಸ್ಥಾನ ವಿದ್ಯಾಪೀಠದ ಸಾಧ್ವಿಯೋಗಿನಿ ಮಾತಾಜಿ ಅವರು ವಹಿಸಿಕೊಂಡಿದ್ದರು,ಮುಖ್ಯ ಅತಿಥಿಗಳಾಗಿ ಖ್ಯಾತ ಹಿರಿಯ ಸಾಹಿತಿ ಸದಾಶಿವಯ್ಯ ಜರಗನಹಳ್ಳಿ,ಚಿಂತಕರಾದ ಗೋವಿಂದಹಳ್ಳಿ ಕೃಷ್ಣೇಗೌಡ, ಸಂಗೀತ ನಿರ್ದೇಶಕರಾದ ಬಿ. ಬಲರಾಮ್, ಡಾ.ಎಸ್.ಆರ್. ರೇಣುಕಾಪ್ರಸಾದ್, ಹಿರಿಯ ಧುರೀಣರಾದ ಡಾ.ಜೈಶಂಕರ್ ರೆಡ್ಡಿ,ಖ್ಯಾತ ರಾಷ್ಟ್ರೀಯ ಲೇಡಿಯ ಡ್ರಮ್ಮರ್ ಡಾ. ಪ್ರಿಯಾ ಆ್ಯಂಡ್ರೊ, ಚಲನಚಿತ್ರದ ಬಹುಭಾಷಾ ನಟಿಯರಾದ ಭೂಮಿಕಾ ಹಾಗೂ ಡಾ.ರಾಜೇಶ್ವರಿ ಪ್ರತಿಷ್ಠಾನದ ಅಧ್ಯಕ್ಷರಾದ ಹಾಗೂ ನಿರ್ದೇಶಕರಾದ ಗುಣವಂತ ಮಂಜು ಹಾಗೂ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version