ಹುಬ್ಬಳ್ಳಿ: ಜಿಲ್ಲಾಡಳಿತದ ಆದೇಶದಂತೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಲಿಡಕರ ಚರ್ಮ ಕುಟೀರಗಳನ್ನು ತೆರವು ಮಾಡಲು ಮುಂದಾಗಿರುವುದು ಸಮಂಜಸವಲ್ಲ. ಇದರಿಂದಾಗಿ ದಲಿತ ದೌರ್ಜನ್ಯ ನಡೆಯುತ್ತಿದ್ದು ತಕ್ಷಣ ಅದನ್ನ ತಡೆಯಬೇಕೆಂದು ಆಗ್ರಹಿಸಿ, ಶ್ರೀ ಹರಳಯ್ಯ ಸಮಗಾರ ಸಮಾಜ ಅಭಿವೃದ್ಧಿ ಮಹಾಮಂಡಳ ಮತ್ತು ಶ್ರೀ ಸಮಗಾರ ಹರಳಯ್ಯ ಯುವ ಮಂಚ್ ವತಿಯಿಂದ ನಗರದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವರದಿ-ರಾಜು ಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ