ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೊನ್ನಳ್ಳಿ ಗ್ರಾಮದ ಹತ್ತಿರ ಕಾಲುವೆಯಲ್ಲಿ ಈಜಾಡಲು ಹೋದ ಯುವಕ ನೀರಿನಲ್ಲಿ ಕಾಣೆಯಾಗಿದ್ದಾನೆ. ಕಾಣೆಯಾದ ಯುವಕನನ್ನು ಪತ್ತೆಮಾಡಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹೊನ್ನಳ್ಳಿ ಗ್ರಾಮದ ಜನರು ಬೆಳಗ್ಗೆಯಿಂದ ಹುಡುಕಾಟ ಮಾಡುತ್ತಿದ್ದರೂ ಯುವಕ ಪತ್ತೆಯಾಗಿಲ್ಲ. ನೇಪಾಳ ಮೂಲದ 28 ವರ್ಷದ ಶಿವ ಎಂಬಾ ಯುವಕ ಹೊನ್ನಳ್ಳಿ ಗ್ರಾಮದಲ್ಲಿ ಇರುವ ತನ್ನ ಗೆಳೆಯನ ಮದುವೆಗೆ ಬೆಂಗಳೂರುನಿಂದ ಬಂದಿದ್ದ. ಗೆಳೆಯರ ಜೊತೆ ಈಜಾಡಲು ಕಾಲುವೆಗೆ ತೆರಳಿದ್ದು, ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಹಿಂದೆ ಕಳೆದ 8 ದಿನಗಳ ಹಿಂದೆ ತಾಲೂಕಿನ ಕಾಳಾಪೂರ ಗ್ರಾಮದ ಬಾಲಕ ಬಸವರಾಜ ತಾಯಿ ಜೊತೆ ಬಟ್ಟೆ ತೊಳೆಯಲು ಇದೇ ಕಾಲುವೆಗೆ ಹೋಗಿದ್ದ. ಆಯಾ ತಪ್ಪಿ ನಾರಾಯಣಪುರ ಬಲದಂಡೆ ಕಾಲುವೆಗೆ ಬಿದ್ದು, ಪೂಲಭಾವಿ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆದ್ರೆ ಇದೀಗ ಒಂದೇ ವಾರದಲ್ಲಿ ಮತ್ತೊಬ್ಬ ಕಾಲುವೆಗೆ ಬಿದ್ದು ಕಾಣಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ವರದಿ- ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.