ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಸೋಂಪುರ ಗ್ರಾಮದಲ್ಲಿನ 25 ನಿರಾಶ್ರಿತ ವೃದ್ದರಿಗೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರತ್ನ ನಟರಾಜು ರಗ್ಗು ವಿತರಣೆಯನ್ನು ಮಾಡಿದರು. ನಂತರ ಮಾತನಾಡಿ ಇಂದು ನಮ್ಮ ನಾಡಿನಲ್ಲಿ ಏನೇಲ್ಲಾ ಸಿರಿ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ತಂದೆ ತಾಯಿಗಳು ಮಕ್ಕಳನ್ನು ಸಾಕಿ ಸಲಹುತ್ತಾರೆ, ಆದರೆ ಅದೇ ಮಕ್ಕಳು ತಮ್ಮ ತಂದೆ ತಾಯಿಗಳನ್ನು ಬೀದಿಗೆ ಬಿಡುತ್ತಾರೆ. ತನ್ನ ಹೊಟ್ಟೆಯಲ್ಲಿರುವಾಗಲೇ ತಾಯಿ ಮಕ್ಕಳಿಗೋಸ್ಕರ ಕನಸಿನಲ್ಲಿ ಗಾಜಿನ ಅರಮನೆಯನ್ನೇ ಕಟ್ಟಿರುತ್ತಾರೆ. ಮಕ್ಕಳು ಮಾತ್ರ ತಮ್ಮನ್ನ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳುವುದಿಲ್ಲ.ಅಂತಹವರಿಗೆ ನಮ್ಮ ಟ್ರಸ್ಟ್ ನ ವತಿಯಿಂದ ನಮ್ಮ ಕೈಲಾದ ಸೇವೆಯನ್ನು ಮಾಡುತ್ತೇವೆ ಎಂದು ತಿಳಿಸಿದರು. ನಂತರ ಈ ಸಂದರ್ಭದಲ್ಲಿ ಸೋಂಪುರ ಗ್ರಾಮ ಪಂಚಾಯತಿಯ ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ಸಂಕಲ್ಪ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಸೌಮ್ಯ ಮಂಜುನಾಥ್, ಖಜಾಂಚಿ ಕುಮಾರಿ ಪೂಜಾ, ನೂತನ ಸದಸ್ಯರಾದ ಶಿವರುದ್ರಪ್ಪ ಎಸ್.ಜೆ, ನಾಗೇಂದ್ರ ಪ್ರಸಾದ್, ಗಂಗಮ್ಮ ಹನುಮಂತರಾಯಪ್ಪ ಹಾಗೂ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಹಾಗೂ ಕ.ರ.ವೇ ತಾಲ್ಲೂಕು ಅಧ್ಯಕ್ಷ ಟಿ.ಡಿ ದಿನೇಶ್ ಕುಮಾರ್ , ಕಲಾವಿದರಾದ ಶಿವಕುಮಾರ್, ಕೃಷ್ಣಾಚಾರ್, ನಟರಾಜು ಸೇರಿದಂತೆ ಇತರರು ಹಾಜರಿದ್ದರು.
ವರದಿ – ದೇವರಾಜ್ ಕೆ.ಎನ್ ಎಕ್ಸ್ ಪ್ರೆಸ್ ಟಿವಿ ಕೊರಟಗೆರೆ