ತಿಪಟೂರು

ನಾಗರಿಕ ಬಂದೂಕು ತರಭೇತಿ ಶಿಬಿರ ಮುಕ್ತಾಯ- IPS ಡಾ.ಕೆ ವಂಶಿಕೃಷ್ಣ ಅವರಿಂದ ಪ್ರಮಾಣ ಪತ್ರ ವಿತರಣೆ..!

Published

on

ತಿಪಟೂರು: ತಿಪಟೂರು ನಗರದ ಕಲ್ಪತರು ಆಡಿಟೋರಿಯಂನಲ್ಲಿ ಪೊಲೀಸ್ ಇಲಾಖೆ ವತಿಯಿಂದ 65ನೇ ನಾಗರೀಕ ಬಂದೂಕು ತರಭೇತಿ ಶಿಬಿರದ ಮುಕ್ತಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಿರಿಯ ನಾಗರೀಕರು ಹಾಗೂ ಸಾರ್ವಜನಿಕರಿಗೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳಿಗೆ ಒಂದು ವಾರಗಳ ಕಾಲ ಬಂದೂಕು ಗುರಿ, ಹಾಗೂ ಬಂದೂಕು ಉಪಯೋಗಿಸುವ ವಿಧಿ ವಿಧಾನಗಳನ್ನು ತಿಳಿಸಿ ಜೊಡಲಾಗಿತ್ತು. ಮುಕ್ತಾಯದ ದಿನವಾದ ಇಂದು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ಮಾನ್ಯ ಪೊಲೀಸ್ ಅಧ್ಯಕ್ಷರಾದ ಡಾ, ಕೆ.ವಂಶಿಕೃಷ್ಣ IPS ರವರು ಪ್ರದಾನ ಮಾಡಿದರು. ತಿಪಟೂರಿನ ಯುವರಾಜ ಪ್ರಥಮ ಗುರಿಕಾರರಾಗಿ ಮೊದಲನೇ ಪ್ರಶಸ್ತಿ ಪಡೆದರು. ಇನ್ನೂ ಈ ಸಂದರ್ಭದಲ್ಲಿ ತಿಪಟೂರಿನ ನಾಲ್ಕನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶಿವಕುಮಾರ್ ರವರು ಹಾಗೂ ಶಾಸಕರಾದ ಶ್ರೀ ನಾಗೇಶ್ ರವರು ಉಪಸ್ಥಿತಿರಿದ್ದರು. ಇನ್ನೂ ಕಾರ್ಯಕ್ರಮದ ನಿರೂಪಣೆಯನ್ನು, ಹಾಗೂ ನೇತ್ರತ್ವವವನ್ನು ತಿಪಟೂರಿನ ಡಿವೈ ಎಸ್ ಪಿ. ಶ್ರೀ ಚಂದನ್ ಕುಮಾರ್ ರವರು ವಹಿಸಿಕೊಂಡಿದ್ದರು.

ವರದಿ- ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version