Connect with us

ಲೈಫ್ ಸ್ಟೈಲ್

ತೂಕ ಸಮತೋಲನಕ್ಕೆ ಬೇಕು ಏಲಕ್ಕಿ..!

Published

on

ನಾವೆಲ್ಲರೂ ತೂಕ ಇಳಿಸಿಕೊಳ್ಳಬೇಕೆಂದು ಹಲವು ಹೊಸ- ಹೊಸ ತಯಾರಿ ಮಾಡುತ್ತಲೇ ಇರುತ್ತೇವೆ. ಆದ್ರೆ ಮನೆಯಲ್ಲೇ ಸಿಗುವ ಈ ಸಣ್ಣ ವಸ್ತುವಿನಿಂದ ನಮ್ಮ ದೇಹದ ತೂಕವನ್ನು ಬಲು ಬೇಗ ಕಡಿಮೆ ಮಾಡಬಹುದಂತೆ. ಹೌದು ಮನೆಯಲ್ಲೇ ಸಿಗುವ ಏಲಕ್ಕಿಯಿಂದ ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದಂತೆ. ಹಾಗಾದ್ರೆ ಈ ಏಲಕ್ಕಿಯಿಂದ ಯಾವೆಲ್ಲಾ ವಿಧಾನದಿಂದ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದು ಅನ್ನೊದನ್ನು ತೋರುಸ್ತೀವಿ.
ಏಲಕ್ಕಿಯನ್ನು ಖೀರು, ಹಲ್ವಾ, ಪಲಾವ್ ನಂತಹ ಅನೇಕ ಖಾದ್ಯಗಳಿಗೆ ಬಳಸುವುದರಿಂದ ಪರಿಮಳವನ್ನು ನೀಡುತ್ತದೆ. ಹಸಿರು ಏಲಕ್ಕಿ ಸೇವಿಸಿದಲ್ಲಿ ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲಾರದು. ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ಮ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.ಆಯುರ್ವೇದದ ಪ್ರಕಾರ, ಹಸಿರು ಏಲಕ್ಕಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಸಹ ಸಹಾಯ ಮಾಡುತ್ತದೆ. ವಿಷಕಾರಿ ಅಂಶಗಳು ದೇಹದ ರಕ್ತದ ಹರಿವನ್ನುಅಡ್ಡಿ ಪಡಿಸುತ್ತದೆ ಮತ್ತು ನಮ್ಮ ಶಕ್ತಿಯ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕೆ ಏಲಕ್ಕಿ ಚಹಾ ಅತ್ಯುತ್ತಮವಾಗಿದೆ. ಹಸಿರು ಏಲಕ್ಕಿ ಅಜೀರ್ಣವನ್ನು ತಡೆಯುತ್ತದೆ, ತೂಕ ಇಳಿಸಿಕೊಳ್ಳಲು ಕೂಡ ಸಹಾಯಕವಾಗಿದೆ.ದೇಹದಲ್ಲಿ ಮೂತ್ರದ ರೂಪದಲ್ಲಿ ನೀರು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಸಿರು ಏಲಕ್ಕಿಯ ಆಯುರ್ವೇದ ಗುಣ ಲಕ್ಷಣಗಳನ್ನು ಹೊಂದಿದ್ದು, ಇದು ಮೂತ್ರ ಪಿಂಡಗಳ ಸುಗಮ ಕಾರ್ಯ ನಿರ್ವಹಣೆಯನ್ನು ಉತ್ತೇಜಿಸುತ್ತದೆ. ಏಲಕ್ಕಿ ಕೊಬ್ಬನ್ನು ಕಡಿಮೆ ಮಾಡುವ ಗುಣ ಹೊಂದಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಹಾಗಾದ್ರೆ ಇನ್ನೇಕೆ ತಡ ಏಲಕ್ಕಿಯನ್ನು ತಿನ್ನಿ ನಿಮ್ಮ ಆರೋಗ್ಯ ವೃದ್ಧಿಸಿ ಕೊಳ್ಳಿ.
Fitness Resource – 1905 Scenic Hwy N, Ste 10000B Snellville, GA – Health & Fitness, Exercise & Fitness Programs, Health Clubs – (770)-978-5034 safe and dangerous roids fit women performing child yoga pose in fitness studio. healthy woman exercising on yoga mat in gym stock photo – alamy
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading
Click to comment

Leave a Reply

Your email address will not be published. Required fields are marked *

ಲೈಫ್ ಸ್ಟೈಲ್

ದೇಹದ ದಣಿವು ನೀಗಿಸುವ ನೈಸರ್ಗಿಕ ಪಾನೀಯ…!

Published

on

By

ಎಳನೀರು ಯಾರಿಗೆ ಗೊತ್ತಿಲ್ಲ ಹೇಳಿ ಹಲವರಿಗೆ ಎಳನೀರು ಪ್ರಿಯವಾದ ಪಾನಿಯವಾಗಿದೆ. ನಾಲಿಗೆ ರುಚಿಗೆ ಎಳನೀರು ನೈಸರ್ಗಿಕವಾಗಿ ತಾಜಾವಾಗಿ ಸಿಗುವ ಪಾನೀಯವಾಗಿದೆ. ಇಂದಿನ ದಿನಗಳಲ್ಲಿ ಸಿಗುವ ರೆಡಿಮೇಡ್ ಪಾನಿಯಗಳಿಗಿಂತ ಎಳನೀರು ಉತ್ತಮವಾದ ಅಂಶವನ್ನು ಹೊಂದಿರುವುದಾಗಿದೆ. ಪುರಾತನ ಕಾಲದಿಂದಲೂ ಬೇಡಿಕೆ ಹೆಚ್ಚಾಗಿಸಿ ಕೊಂಡಿರುವ ಈ ಪಾನೀಯ ಯಾವುದೇ ತಂಪು ಪಾನೀಯಗಳಿಗಿಂತಲೂ ತಾನೇನೂ ಕಮ್ಮಿ ಇಲ್ಲಾ ಎಂಬ ರೀತಿಯಲ್ಲಿ ತನ್ನ ವರ್ಚಸ್ಸ್ ಅನ್ನು ಕಾಪಾಡಿಕೊಂಡು ಬಂದಿದೆ. ಸಕ್ಕರೆ ಖನಿಜ ಮತ್ತು ಲವಣಾಂಶ ಅಧಿಕವಾಗಿದ್ದು ದೇಹದ ನಿಶಕ್ತಿಯನ್ನು ಹೋಗಲಾಡಿಸಲು ಇದು ಬಹಳ ಉಪಯುಕ್ತವಾಗಿದೆ.. ದೇಹದಲ್ಲಿ ನೀರಿನಂಶ ಕಡಿಮೆ ಇದ್ದರೆ ಹಾಗೂ, ತೀವ್ರ ನಿಶಕ್ತಿ ಸಮಸ್ಯೆಯಿಂದ ಬಳಲುವವರಿಗೆ ಈ ಪಾನೀಯ ಅಗತ್ಯವಾಗಿದೆ.ವಯಸ್ಸಾಗುವಿಕೆ, ಚರ್ಮಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ದೂರ ಮಾಡುವ ಅಂಶನ್ನು ಈ ಎಳನೀರು ಒಳಗೊಂಡಿದೆ. ಯೂರಿಕ್ ಆಮ್ಲಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗುವವರು ಹೆಚ್ಚಾಗಿ ಎಳನೀರು ಸೇವನೆ ಮಾಡುವುದು ಉತ್ತಮ. ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು, ಮೂತ್ರ ಪಿಂಡಕ್ಕೆ ಕಾರಣವಾಗುವ ಲವಣಾಂಶ ಕರಗಿಸುತ್ತದೆ. ಊಟವಾದ ನಂತರ ಎಳನೀರು ಕುಡಿದರೆ ಊಟದ ನಂತರ ಹೊಟ್ಟೆಯಲ್ಲಿ ಉರಿ ಉಂಟಾದಾಗ ಎಳನೀರು ಕುಡಿಯುವುದರಿಂದ ತಕ್ಷಣದಲ್ಲಿ ಆರಾಮ ಸಿಗುತ್ತದೆ. ಕಲ್ಲುಸಕ್ಕರೆ ಮತ್ತು ಎಲಕ್ಕಿ ಚೂರ್ಣ ಸೇರಿಸಿ ದಿನಕ್ಕೊಂದು ಬಾರಿ ಸೇವಿಸುತ್ತಿದ್ದರೆ ಎದೆನೋವು, ಬಿಕ್ಕಳಿಕೆ, ನಿದ್ರಾಹೀನತೆ, ಹೊಟ್ಟೆ ಹುಣ್ಣು ನಿವಾರಣೆಯಾಗುತ್ತದೆ. ಮಲಗುವ ಮೊದಲು ನೀವು ಎಳೆನೀರು ಕುಡಿದರೆ ಅದರಿಂದ ದೇಹದಲ್ಲಿ ಇರುವ ಎಲ್ಲಾ ವಿಷಕಾರಿ ಅಂಶವನ್ನು ಹೊರ ಹಾಕುವುದರೊಂದಿಗೆ ಮೂತ್ರಕೋಶವನ್ನು ಶುದ್ಧೀಕರಿಸುತ್ತದೆ. ರೋಗಗಳಿಗೆ ರಾಮಬಾಣವಾದ ಔಷಧೀಯ ಅಂಶವೂ ಎಳನೀರಿನಲ್ಲಿರುವುದರಿಂದ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಒಂದು ಎಳನೀರನ್ನಾದರೂ ಕುಡಿಯುವ ಅಭ್ಯಾಸವನ್ನು ಇರಿಸಿಕೊಳ್ಳ ಬೇಕು ಆಗ ಮಾತ್ರ ಆರೋಗ್ಯವನ್ನು ವೃದ್ಧಿಸಿ ಕೊಳ್ಳಬಹುದು.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

ಲೈಫ್ ಸ್ಟೈಲ್

ರುಚಿಯಾದ ಅಡುಗೆಗೆ ಈರುಳ್ಳಿ ಬದಲಿಗೆ ಏನೇನು ಬಳಸಬಹುದು ಗೊತ್ತ..?

Published

on

By

ಒಂದು ಕಡೆ ಗಗನ ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಅದನ್ನು ಕತ್ತರಿಸುವುದಕ್ಕೆ ಮೊದಲೇ ಕಣ್ಣಿನಲ್ಲಿ ನೀರು ಬರುವ ಪರಿಸ್ಥಿತಿ ಉಂಟಾಗಿದೆ. ಇನ್ನು ಈರುಳ್ಳಿ ಹಾಕದೆ ಸಾರು ಅಥವಾ ಪಲ್ಯ ಮಾಡಿದರೆ ರುಚಿಸುವುದೇ ಇಲ್ಲ, ಇನ್ನು ಸಾರು, ಗ್ರೇವಿ ಈರುಳ್ಳಿ ಇಲ್ಲದೆ ಮಾಡುವುದೇ ಹೇಗೆ ಎಂಬುವುದೇ ಹೆಚ್ಚಿನವರ ಚಿಂತೆಯಾಗಿದೆ. ಇನ್ನು ಈರುಳ್ಳಿ , ಬೆಳ್ಳುಳ್ಳಿ ಹಾಕದೆ ಅಡುಗೆ ಮಾಡೋಣ ಅಂದರೆ ಈರುಳ್ಳಿ ರುಚಿ ನೋಡಿದವರಿಗೆ ಅಷ್ಟು ಇಷ್ಟವಾಗುವುದಿಲ್ಲ. ಅಡುಗೆಗೆ ಈರುಳ್ಳಿ ಹಾಕಿದರೆ ಅದರ ಸ್ವಾದವೇ ಬೇರೆ. ಟೊಮೆಟೊ ಗೊಜ್ಜು, ಪಲ್ಯ ಇವುಗಳು ರುಚಿಯಾಗಲು ಈರುಳ್ಳಿ ಬೇಕೇಬೇಕು.
1) ಗ್ರೇವಿ, ಸಾರುಗೆ ಮಾಡಲು ಈರುಳ್ಳಿ ಬದಲಿಗೆ ಗೋಡಂಬಿ ಕೂಡ ಅಧಿಕ ಬೆಲೆಯ ನಟ್ಸ್ ಆಗಿದ್ದರೂ ಹೀಗಿನ ಈರುಳ್ಳಿ ಬೆಲೆಗೆ ಹೋಲಿಸಿದರೆ ಗೋಡಂಬಿ ಬಳಸುವುದೇ ಸೂಕ್ತವಾಗಬಹುದು. ಒಂದು ಸಾರು ಮಾಡಲು ಕಡಿಮೆಯೆಂದರೂ ಸಾಧಾರಣ ಗಾತ್ರದ ಒಂದು ಈರುಳ್ಳಿ ಬೇಕು. ಅದೇ ಗ್ರೇವಿಯಾದರೆ ಈರುಳ್ಳಿ ಸ್ವಲ್ಪ ಅಧಿಕವೇ ಬೇಕು. ಪನ್ನೀರ್, ನಾನ್ವೆಜ್ ಗ್ರೇವಿಗೆ ಈರುಳ್ಳಿ ಹೆಚ್ಚು ಹಾಕಿದರೆ ಮಾತ್ರ ರುಚಿ. ಈರುಳ್ಳಿ ಬೆಲೆ ಅಧಿಕವಾಗಿರುವಾಗ ಈರುಳ್ಳಿ ಬದಲಿಗೆ ಗೋಡಂಬಿ ಹಾಕಿದರೆ ರುಚಿ ಚೆನ್ನಾಗಿ ಬರುತ್ತದೆ.
2) ಉತ್ತರ ಕರ್ನಾಟಕದಲ್ಲಿ ಕಡಲೆ ಹಿಟ್ಟು ಗ್ರೇವಿ ಹೆಚ್ಚಾಗಿ ಮಾಡಲಾಗುವುದು. ಕಡಲೆ ಹಿಟ್ಟು ಹಾಕಿದಾಗ ಗ್ರೇವಿ ರೀತಿ ಗಟ್ಟಿಯಾಗಿ ಬರುವುದರಿಂದ ಈರುಳ್ಳಿ ಹಾಕದಿದ್ದರೂ ನಡೆಯುತ್ತೆ.
3) ಆಲೂಗಡ್ಡೆ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ, ಸ್ವಲ್ಪ ಉಪ್ಪು ಹಾಗೂ ಮಸಾಲೆ ಹಾಕಿ ಮ್ಯಾಶ್ ಮಾಡಿ ಸಂಬಾರ್ ಗೆ ಹಾಕಿದರೆ ಸಂಬಾರ್ ರುಚಿಯಾಗುವುದು.
4) ಪನ್ನೀರ್ ಅನ್ನು ಮ್ಯಾಶ್ ಮಾಡಿ ಈರುಳ್ಳಿ ಬದಲಿಗೆ ಬಳಸಬಹುದು.
5) ಸೋರೆಕಾಯಿ/ಪಡವಲಕಾಯಿ ಇದನ್ನು ತುರಿದ ಈರುಳ್ಳಿ ರೀತಿ ಪಲ್ಯ ಮಾಡುವಾಗ ಬಳಸಬಹುದು.
6) ಈರುಳ್ಳಿ ಪುಡಿ ಈರುಳ್ಳಿಯಷ್ಟು ದುಬಾರಿಯಲ್ಲ. ಅಡುಗೆಗೆ ಈರುಳ್ಳಿ ರುಚಿ ಬೇಕೇಬೇಕು ಎಂದು ಬಯಸುವುದಾದರೆ ಈರುಳ್ಳಿ ಪುಡಿ ಬಳಸಬಹುದು. ಈರುಳ್ಳಿ ಹಾಕದ ಸಾರಿಗೆ ಸ್ವಲ್ಪ ಇಂಗು ಹಾಕಿದರೆ ರುಚಿ ಚೆನ್ನಾಗಿಯೇ ಬರುತ್ತದೆ. ಇನ್ನು ಸಲಾಡ್ಗೆ ಈರುಳ್ಳಿ ಬದಲಿಗೆ ಸೌತೆಕಾಯಿಯಿಂದಲೂ ಕೂಡ ಅಲಂಕರಿಸಬಹುದು. ಈರುಳ್ಳಿ ದುಬಾರಿಯಾದಾಗ ಈರುಳ್ಳಿ ಬಗ್ಗೆ ಚಿಂತೆ ಮಾಡುವ ಬದಲು ಮೊದಲೆಲ್ಲಾ ಮಳೆಗಾಲಕ್ಕಾಗಿ ಈರುಳ್ಳಿ ಸಂಗ್ರಹಿಸಿಡುತ್ತಿದ್ದ ಹಾಗೆ ಮಾಡಿಟ್ಟರೆ ಈ ರೀತಿ ಬೆಲೆ ಹೆಚ್ಚಿದಾಗ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಈರುಳ್ಳಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸಂಗ್ರಹಿಸಿಟ್ಟರೆ ವರ್ಷದವರೆಗೆ ಬಳಸಬಹುದಾಗಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

ಲೈಫ್ ಸ್ಟೈಲ್

ಬೇವು ತಿನ್ನೊದ್ರಿಂದ ದೇಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ..!

Published

on

By

ಬೇವು ತನ್ನ ವಿಶೇಷವಾದ ಔಷಧೀಯ ಗುಣಗಳಿಂದ ಪ್ರಾಚೀನ ಆಯುರ್ವೇದ ಪದ್ದತಿಯಿಂದ ಇಂದಿನವರೆಗೂ ಅನೇಕ ರೋಗ ರುಜಿನಗಳಿಗೆ , ಚರ್ಮದ ಸಮಸ್ಯೆಗಳಿಗೆ ಒಳ್ಳೆಯ ಔಷಧಿಯಾಗಿ ಬಳಸಲ್ಪಡುತ್ತದೆ. ಆದರೆ ಯಾವುದೇ ಪದಾರ್ಥಗಳನ್ನು ಅಷ್ಟೇ ದೇಹಕ್ಕೆ ಅತೀಯಾದರೆ ಅದರಿಂದ ನಾನಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಬೇವು ಕೂಡ ಹಾಗೇ ಇದರ ಅತಿಯಾದ ಸೇವನೆ ದೇಹಕ್ಕೆ ಕುಂದು ಕೊರತೆ ತರುವುದರಲ್ಲಿ ಎರಡನೇ ಮಾತಿಲ್ಲ.ಬೇವಿನ ಅತೀಯಾದ ಸೇವನೆಯಿಂದ ಯಾವೆಲ್ಲಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ.
1)ಅಲರ್ಜಿಗೆ ಕಾರಣವಾಗಬಹುದು- ಬೇವಿನ ಎಲೆಗಳನ್ನು ಪ್ರತಿ ದಿನ ಮೂರು ವಾರಗಳ ತನಕ ಬೆಡದೇ ಸೇವಿಸಿದರೆ ಬಾಯಿಯ ಊರಿಯೂತದ ಸಮಸ್ಯೆ ಕಂಡು ಬರುತ್ತದೆ. ಬೇವಿನ ಎಲೆಗಳನ್ನು ಅಲರ್ಜಿ, ಗುಳ್ಳೆಗಳು, ಮೊಡವೆಗಳು ಇತ್ಯಾದಿ ಸಮಸ್ಯೆಗಳಿಗೆ ಉಪಾಯೋಗಿಸುತ್ತಾರೆ. ಆದ್ರೆ ಇದರ ಹೆಚ್ಚಾದ ಬಳಕೆ ಸಮಸ್ಯೆಯನ್ನು ಹೋಗಾಲಾಡಿಸುವ ಬದಲು ಇನ್ನಷ್ಟು ಜಾಸ್ತಿ ಮಾಡುತ್ತದೆ..
2)ಫಲವತ್ತತೆ ಕುಂಠಿತಗೊಳ್ಳ ಬಹುದು- ಫಲವತ್ತತೆಯ ವಿಷಯದಲ್ಲಿ ಸಂಶೋದಕರು ಬೇವಿನ ಹೂವುಗಳ ಸಾರವನ್ನು ಬಳಸಿ ಇಲಿಗಳ ಮೇಲೆ ಪ್ರಯೋಗ ನಡೆಸಿದಾಗ ಅವುಗಳಲ್ಲಿ ಅಂಡೋತ್ಪತ್ತಿಯು ಭಾಗಶಃ ನಿರ್ಬಂಧವಾಗಿರುವುದು ಕಂಡು ಬಂದಿದೆ. ಆದ್ದರಿಂದ ಬೇವಿನ ಎಲೆಗಳನ್ನು ಜನರು ಅತಿಯಾಗಿ ಬಳಸುವುದರಿಂದ ಈ ರೀತಿಯಾ ಅಡ್ಡ ಪರಿಣಾಮಗಳು ತುತ್ತಾಗ ಬಹುದು ಎಂದು ಸಂಶೋದನೆಯ ಪ್ರಕಾರ ಸಾಬೀತಾಗಿದೆ.
3)ಗರ್ಭಪಾತಕ್ಕೆಕಾರಣವಾಗ ಬಹುದು- ಪ್ರಾಣಿಗಳ ಅಧ್ಯಯನಗಳಲ್ಲಿ ಬೇವಿನ ಸಾರ ಗರ್ಭಧಾರಣೆಯನ್ನು ಪ್ರೇರೇಪಿಸುತ್ತದೆ. ರೋಡೆಂಟ್ ಗಳು ಮತ್ತು ಮಂಗಗಳಲ್ಲಿ ಬೇವಿನ ಸಾರ ಗರ್ಭಾವಸ್ಥೆಯನ್ನು ಸ್ಥಗಿತಗೊಳಿಸುವುದು ಸಾಬೀತಾಗಿರುವುದರಿಂದ ಮಕ್ಕಳು ಬೇಕು ಅನ್ನುವವರಿಗೆ ಹಾಗೂ ಬೇಡ ಅನ್ನುವವರಿಗೆ ಈ ಬೇವಿನ ಉಪಯೋಗ ಬೇಡ ಎಂದು ವಿಜ್ಞಾನಿಗಳು ವಾದಿಸಿದ್ದಾರೆ..
4) ಮೂತ್ರ ಪಿಂಡಗಳಿಗೆ ಹಾನಿ ಉಂಟಾಗಬಹುದು-ಒಂದು ಅಧ್ಯಯನ ತಿಳಿಸಿರುವ ಪ್ರಕಾರ ಒಬ್ಬ ವ್ಯಕ್ತಿಯಲ್ಲಿ ಚೀನೀ ಗಿಡಮೂಲಿಕೆಗಳನ್ನು ಸೇವಿಸಿದ ನಂತರ ತೀವ್ರ ಮೂತ್ರ ಪಿಂಡದ ವೈಪಲ್ಯ ಕಂಡು ಬಂದಿರುವುದು ಬೆಳಕಿಗೆ ಬಂದಿದ್ದು ಆ ಗಿಡ ಮೂಲಿಕೆಯ ಔಷದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇವು ಇದ್ದಿದ್ದು ಬೆಳಕಿಗೆ ಬಂದಿದೆ. ಬೇವಿನ ಸೇವನೆಗೂ ಕಿಡ್ನಿ ವೈಪಲ್ಯಕ್ಕೂ ನೇರವಾದ ಸಂಬಂಧ ಇಲ್ಲದಿದ್ದರೂ ಜಾಗರೂಕತೆಯಿಂದ ಇರುವುದು ಒಳ್ಳೆಯದು.
5)ಬ್ಲಡ್ಶುಗರ್ಮಟ್ಟವನ್ನುತೀರಾಕಡಿಮೆಮಾಡಬಹುದು-ಬೇವು ಮತ್ತು ಪಾಲಕ್ಸೊಪ್ಪಿನ ಸಂಯೋಜನೆ ಮನುಷ್ಯನ ದೇಹದಲ್ಲಿ ಹೈಪೋಟೆನ್ಸಿವ್ಗುಣ ಲಕ್ಷಣಗಳನ್ನು ತೊರಿಸುತ್ತದೆ ಎಂದು ಸಂಶೊದಕರು ತಿಳಿಸಿದ್ದು. ವೈಧ್ಯರು ಮಧು ಮೇಹ ರೋಗಿಗಳಿಗೆ ಸಕ್ಕರೆ ಅಂಶದ ನಿಯಂತ್ರಣಕ್ಕೆ ಸಣ್ಣ ಪ್ರಮಾಣದ ಬೇವಿನ ಎಣ್ಣೆಯನ್ನು ಸೇವಿಸಲು ಹೇಳಿರುತ್ತಾರೆ. ವೈಧ್ಯರ ಸಲಹೆ ಮೀರಿ ಅವರು ಸೂಚಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಬೇವಿನ ಎಣ್ಣೆಯನ್ನು ಸೇವಿಸಿದರೆ ದೇಹದರಕ್ತದಲ್ಲಿರುವ ಸಕ್ಕರೆ ಅಂಶದ ಪ್ರಮಾಣ ತೀರಾ ತಳಹದಿಗೆ ಹೋಗಿ ಅತೀಯದಾ ಆಯಾಸ ತಲೆ ಸುತ್ತು ಶುರುವಾಗುತ್ತದೆ.
6) ಶಿಶುಗಳ ಮಾರಣ ಹೋಮಕ್ಕೆ ಕಾರಣವಾಗಬಹುದು-ಬೇವು ಪುಟ್ಟ ಕಂದಮ್ಮಗಳಿಗೆ ವಿಷಕಾರಿ, ಕೇವಲ 5ಎಂಎಲ್ ನಷ್ಟು ಬೇವಿನ ಎಣ್ಣೆ ಹಸುಗೂಸುಗಳ ಸಾವಿಗೆ ಕಾರಣವಾಗಿರುವುದು ಕಂಡು ಬಂದಿದೆ. .ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಬೇವಿನ ಎಣ್ಣೆಯ ವಿಷ ಪ್ರತಿ ಕಿಲೋಗ್ರಾಂಗೆ 12 ರಿಂದ 24 ಎಂಎಲ್ ನ ಪ್ರಮಾಣದಲ್ಲಿರುತ್ತದೆ ಎಂದು ಸೂಚಿಸಲಾಗಿದೆ.
7)ಹೊಟ್ಟೆಯಲ್ಲಿ ಕಿರಿ ಕಿರಿ ಉಂಟು ಮಾಡಬಹುದು- ವಿಪರೀತ ಬೇವಿನ ಸೇವನೆ ಹೊಟ್ಟೆಯಲ್ಲಿ ಅಜೀರ್ಣತೆ ಮತ್ತು ಹೊಟ್ಟೆ ತೊಳೆಸಿದಂತಹ ಕಿರಿಕಿರಿಯ ಅನುಭವವನ್ನು ಉಂಟು ಮಾಡುತ್ತದೆ.
8) ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಪ್ರಚೋದಿಸ ಬಹುದು- ಬೇವು ಯುಕ್ತ ಉತ್ಪನ್ನಗಳನ್ನು ಸೇವಿಸುವುದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿಯ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಕೆಲ ತಜ್ಙರು ಹೇಳುವ ಪ್ರಕಾರ ಬೇವಿನ ವಿಪರೀತ ಸೇವನೆ, ಮನುಷ್ಯನ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಬಹಳಷ್ಟು ಪ್ರಚೋದನೆಗೊಳಿಸಿ ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತದೆ.
ಬೇವಿನ ಎಲೆಗಳನ್ನು ಬಳಸುವುದರಿಂದ ಯಾವೇಲ್ಲಾ ರೀತಿಯ ಅನುಕೂಲಗಳು ಆಗುತ್ತದೆಯೋ ಅಷ್ಟೇ ಅನಾನುಕೂಲಗಳು ಕೂಡ ಉಂಟಾಗುತ್ತದೆ ಅನ್ನೊದನ್ನತಿಳಿಸಿದ್ದಿವಿ. ನಾವು ಯಾವ್ದೇ ಪದಾರ್ಥಗಳಾದ್ರು ಸಹ ಇತಿ ಮಿತಿಯಾಗಿ ಬಳಸಬೇಕು .ಇಲ್ಲದಿದ್ದರೆ ನಾನಾ ರೀತಿಯ ತೊಂದರೆಗಳಿಗೆ ತುತ್ತಾಗುವುದು ಗ್ಯಾರಂಟಿ..

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

Trending

Copyright © 2023 EXPRESS TV KANNADA

yaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirkareasbet girişbakırköy escortkareasbetbetingo güncel girişdizimatFındıkzade EscortBitcoin Kabul Eden Bahis Sitelerigüvenilir casino sitelerigobahis girişasper casino girişesbet girişbullbahis girişbenimbahis girişbenimbahisGüvenilir poker siteleriSüper Ligizmir escortBakırköy Escortyabancı diziesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortistanbul escort30 TL Bonus Veren Bahis Siteleri betmatikmariobetonwinbetistsüpertotobetgrandpashabet telegramBetist Girişbullbahisbullbahisen iyi slot sitelerixslot giriş adresitipobet365ilk yatırım bonusu veren sitelerizmir travestibetturkeybetturkeybetparkjojobetbetpark girişbetistmarsbahismarsbahis girişdeneme bonusu veren sitelerdeneme bonusu veren sitelerBahis Siteleribetturkeybetturkey girişbetturkeyBinance Kayıt OlmaBetnano girişsuperbetinbetturkeycasibomparibahisdeneme bonusu veren sitelercasibomdeneme bonusu veren sitelerportobetBetnanojojobetextrabetoleybet giriş adresiextrabet