Connect with us

ರಾಯಚೂರು

ಸ್ವಾತಂತ್ರ್ಯ ಹೋರಾಟಗಾರ ಸಗರ ಅಚ್ಚಪ್ಪಗೌಡ ಸುಬೇದಾರ..!

Published

on

ಶಹಾಪುರ : 1947ರ ಸಮಯದಲ್ಲಿ ಒಂದೆಡೆ ದೇಶ ಪರಕೀಯರ ಅಧೀನದಿಂದ ಮುಕ್ತಿ ಪಡೆದು ಸ್ವಾತಂತ್ರ್ಯದ ವಿಜಯೋತ್ಸವದಲ್ಲಿದರೆ ಇನ್ನೊಂದೆಡೆ ನಿಜಾಮರ ದಾಸ್ಯದಿಂದ ನರಕಯಾತನೆಯ ಅನುಭವಿಸುತ್ತಿತ್ತು.ಈ ಪ್ರದೇಶ ಅಂದರೆ ಹೈದರಾಬಾದ್ ಕರ್ನಾಟಕದ ಕಲಬುರ್ಗಿ ಬೀದರ್ ಬಳ್ಳಾರಿ ರಾಯಚೂರು ಕೊಪ್ಪಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳು ನಿಜಾಮನ ಅಧೀನದಲ್ಲಿದ್ದವು.ಆತನ ಸಾಮ್ರಾಜ್ಯವು ಭಾರತದೊಂದಿಗೆ ವಿಲೀನಗೊಳಿಸಲು ನಿರಾಕರಿಸಿದ್ದಕ್ಕಾಗಿ ಅಂದಿನ ಗೃಹಮಂತ್ರಿ ಸರದಾರ ವಲ್ಲಬಾಯಿ ಪಟೇಲರ ನೇತೃತ್ವದಲ್ಲಿ ಸಾವಿರಾರು ಜನ ನಿಜ ಅವರ ವಿರುದ್ಧ ಹೋರಾಟಕ್ಕೆ ಸಜ್ಜಾದರು.ರಾಜಕಾರರ ಹಾವಳಿಯಿಂದ ಜನತೆ ತತ್ತರಿಸಿ ಹೋಗಿ ಸಾವು ನೋವುಗಳು ಸಾಕಷ್ಟು ಅನುಭವಿಸಿದ್ದರು. ರಜಾಕಾರರ ಹಾವಳಿಯಿಂದ ಜನರನ್ನು ಪಾರು ಮಾಡಲು ಅಚ್ಚಪ್ಪ ಗೌಡರು ನಿಜಾಮರ ವಿರುದ್ಧ ಟೊಂಕ ಕಟ್ಟಿ ನಿಂತು ಯುದ್ಧಭೂಮಿಯಲ್ಲಿ ಸೆಣಸಾಡಿ ಹೈದರಾಬಾದ್ ಕರ್ನಾಟಕದ ಗೆಲುವಿನ ಕಹಳೆ ಮೊಳಗಿಸಿದರು .ವೀರ ಕೆಚ್ಚೆದೆಯ ಧೀರ ನಾಯಕ ಅಚ್ಚಪ್ಪಗೌಡ ಸುಬೇದಾರ್ ಈ ಚಳವಳಿಯಲ್ಲಿ ಇವರ ಪಾತ್ರ ಮಹತ್ವದ್ದು. ಅಚ್ಚಪ್ಪ ಗೌಡರು ಮೂಲತಃ ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಶರಣಪ್ಪಗೌಡ ಗಂಗಮ್ಮ ಸುಬೇದಾರ್ ಎಂಬ ದಂಪತಿಗಳ ಮಗನಾಗಿ 1925 ಫೆಬ್ರವರಿ18 ರಂದು ಜನಿಸಿದರು ಕಲಬುರ್ಗಿ ಮತ್ತು ಹೈದರಾಬಾದಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಮುಂದೆ ಬಂಟನೂರು ಗ್ರಾಮದಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು ಆ ದಿನಗಳಲ್ಲಿ ಆಂಗ್ಲರ ದಬ್ಬಾಳಿಕೆ ಮತ್ತು ರಜಾಕಾರರ ವಿರುದ್ಧ ಸಿಡಿದೆದ್ದರು. ಯಾವ ಪ್ರದೇಶಗಳ ಮೇಲೆ ನಿಜಾಮರ ದಬ್ಬಾಳಿಕೆ ಕೊಲೆ ಸುಲಿಗೆ ಮಾಡಿದ್ದರು ಅಂತ ಗ್ರಾಮಗಳಿಗೆ ತಿರುಗಾಡಿ ಸಮೀಕ್ಷೆ ಮಾಡಿ ಅಲ್ಲಿಯ ನೊಂದ ಜನತೆಗೆ ಸಾಂತ್ವನ ಹೇಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಅವರ ವಿರುದ್ಧ ಹೋರಾಟಕ್ಕೆ ಬೆಂಬಲವಾಗಿ ನಿಂತು ಹುರಿದುಂಬಿಸಿದರು.ಗೌಡರ ಬಾಲ್ಯದಿಂದಲೂ ಅವರ ಆಪ್ತರಾಗಿ ಬಲಗೈ ಬಂಟರಾಗಿದ್ದ ಕ್ರಿಯಾಶೀಲರಾಗಿದ್ದ ರಾಯಪ್ಪ ಮತ್ತು ಹಣಮಂತ ಅಚ್ಚಪ್ಪ ಗೌಡರ ಆಪ್ತರಾಗಿದ್ದರು ಅವರೊಂದಿಗೆ ಕುದುರೆ ಸವಾರಿ ಶಸ್ತ್ರ ತರಬೇತಿಯಲ್ಲಿ ತೊಡಗುತ್ತಿದ್ದರೂ ಕಾಕಿ ಟೋಪಿ ಖಾಕಿ ಉಡುಪು ಕಾಲಲ್ಲಿ ಬಿಟ್ಟು ಕೈಯಲ್ಲಿ ಬಂದೂಕು ನಿತ್ಯವೂ ಪರೇಡ್ ನಡೆಸುತ್ತಿದ್ದರೂ ನೋಡೋದಕ್ಕೆ ನೇತಾಜಿ ರೂಪದಲ್ಲಿ ಕಾಣುತ್ತಿದ್ದರು ಅವರ ಅಮ್ಮ ಮಾತಂತೂ ಮಾಣಿಕ್ಯದಂತೆ ಅವರ ಜೀವನ ಶೈಲಿಯ ಮಾತಿಗೆ ಇಂದಿನ ಜನಪದ ಮಹಿಳೆಯರ ಗ್ರಾಮೀಣ ಭಾಗದಲ್ಲಿ ಬೀಸುವಾಗ ಕುಟ್ಟುವಾಗ ಹಾಡನ್ನು ಜಾನಪದ ಶೈಲಿಯಲ್ಲಿ ಹಾಡಿ ಸಂತೋಷ ಕೊಡುತ್ತಾರೆ ಆ ಹಾಡಿನ ತುಣುಕು ಒಂದು ಹೀಗಿದೆ ಪುಂಡಿಯ ಕಟಿಗ್ಯಾಗ ಕೆಂಡ ಒಗೆದವರ್ಯಾರ ಪುಂಡ ಸಗರದ ಅಚ್ಚಪ್ಪಗೌಡ ಆಡಿದ ಮಾತು ಬಂಡಿಗೆ ಕೀಲ ಜಡಿದಂಗ.ಒಂದು ದಿನ ಬಂಟನೂರು ಕ್ಯಾಂಪಿನಲ್ಲಿ ಬ್ಯಾರಿಸ್ಟರ್ ವೆಂಕಟಪ್ಪ ನಾಯಕ ಮತ್ತು ಅಪ್ಪಾರಾವ್ ವಕೀಲ ಹಾಗೂ ಸುಬೇದಾರರು ರಜಾಕಾರರ ವಿರುದ್ಧ ಹೋರಾಟದ ಯೋಜನೆ ರೂಪಿಸುತ್ತಿದ್ದರು. ವಸ್ತುಗಳನ್ನು ನೊಂದ ಬಡ ಜನರಿಗೆ ಹಂಚುತ್ತಿದ್ದರು ಎಂದು ಇಂದಿಗೂ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಅಚ್ಚಪ್ಪ ಗೌಡರ ಮೊದಲಿನಿಂದಲೂ ಬಳ್ಳಾರಿಯ ಉಮರ್ ಕಣ್ಣಿನಲ್ಲಿ ನೆಟ್ಟಿದ್ದರೂ ಗೌಡರನ್ನು ಹತ್ಯೆಗೈಯುವುದಾಗಿ ಬಳ್ಳಾರಿ ಉಮರ್ ಒಳಸಂಚು ಆಗಾಗ ರೂಪಿಸಿ ವಿಫಲನಾಗುತ್ತಿದ್ದ. ಒಂದು ದಿನ ಸಗರ ಚಾವಡಿ ಕಟ್ಟೆಯಲ್ಲಿ ಕುಳಿತಿದ್ದ ಗೌಡರ ಮೇಲೆ ಹಠಾತ್ತನೆ ಉಮರ್ ದಾಳಿ ಮಾಡಿದ ಗೌಡರನ್ನು ತಳವಾರದ ಸಭೆ ಬಡಿಯುವುದಕ್ಕೆ ಪ್ರಯತ್ನಿಸಿದ ಗೌಡರು ತಮ್ಮ ಕೈಯಲ್ಲಿನ ಖಡ್ಗದಿಂದ ತಪ್ಪಿಸಿಕೊಳ್ಳುತ್ತಾ ಉಮರ್ ನ ವಿರುದ್ಧ ಹೋರಾಡಿದರು. ಸ್ವಾತಂತ್ರ್ಯದ ಸಲುವಾಗಿ ಮನೆಯ ಮಾರು ಹೆಂಡತಿ ಮಕ್ಕಳು ಬಿಟ್ಟು ಬಂಟನೂರ ಕ್ಯಾಂಪಿನಲ್ಲಿ ಸೇನೆ ಕಟ್ಟಿಕೊಂಡು ನಿರಂತರವಾಗಿ ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ ಮತ್ತು ಏಳಿಗೆಗಾಗಿ ಗೌಡರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಗೌಡರು ತಮ್ಮ ಜೀವನ ಗೌಡರ ನಿರಂತರ ಹೋರಾಟ ಜೀವನದ ಆದರ್ಶ ತತ್ವಗಳು ಇಂದಿಗೂ ಬದುಕುಳಿದಿವೆ. ಸಾರ್ಥಕ ಬದುಕಿನಿಂದ ಬಾಳಿದ ಅಚ್ಚಪ್ಪ ಗೌಡರು 1983 ಡಿಸೆಂಬರ್ 3 ರಂದು ವಿಧಿವಶರಾದಾಗ ಸಗರ ನಾಡಿಗೆ ಕತ್ತಲಾವರಿಸಿ ದಂತಾಗಿ ಜನರೆಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದ್ದರು ಅವರು ಅಗಲಿ 35 ವರ್ಷಗಳ ಕ್ಕೂ ಹೆಚ್ಚು ಕಾಲ ಗತಿಸಿದರೂ ಅವರ ಸಾಹಸ ವೀರಗಾಥೆ ಧೈರ್ಯ ಇಂದಿಗೂ ಜೀವಂತವಾಗಿದೆ.

ವರದಿ-ಬಸವರಾಜ ಸಿನ್ನೂರು ಶಹಾಪುರ.

Continue Reading
Click to comment

Leave a Reply

Your email address will not be published. Required fields are marked *

ನಿಮ್ಮ ಜಿಲ್ಲೆ

ಮಹಿಳೆ ಮೇಲೆ ಹಲ್ಲೆ ; ಆರೋಪಿಗಳ ಬಂಧನಕ್ಕೆ ರೈತ ಸಂಘ ಆಗ್ರಹ

Published

on

By

ರಾಯಚೂರು(ಲಿಂಗಸೂಗೂರು): ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಯ್ಯಾಪೂರ ಗ್ರಾಮದ ಆಶಾ ಕಾರ್ಯಕರ್ತೆ ಅಂಬುಜಾ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆAದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಒತ್ತಾಯಿಸಿದ್ದಾರೆ.

ಅಂದ ಹಾಗೇ ಬಯ್ಯಾಪೂರ ಗ್ರಾಮಕ್ಕೆ ಮತ್ತು ಮುದಗಲ್ ಠಾಣೆಗೆ ಭೇಟಿ ವೇಳೆ ಮಾತನಾಡಿದ ರೂಪಾ ಶ್ರೀನಿವಾಸ ನಾಯಕ, ಬಯ್ಯಾಪೂರ ಗ್ರಾಮದಲ್ಲಿ ಮಹಿಳೆ ಅಂಬುಜಾಗೆ ಯಾರು ಇಲ್ಲ.ಸದ್ಯ ಈ ಮಹಿಳೆ ಮೇಲೆ ಅದೇ ಗ್ರಾಮದ ಹನುಮನಗೌಡ ಹಾಗೂ ಆತನ ಕುಟುoಬಸ್ಥರು ಮಹಿಳೆ ಮೇಲೆ  ಹಲ್ಲೆ ಮಾಡಿದ್ದಾರೆ.ಈ ಸಂಬAಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೀಗಾಗಿ ಮಹಿಳೆಯ ಸುರಕ್ಷತೆಗಾಗಿ ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಬೇಕು ಅಂತ ಆಗ್ರಹಿಸಿದ್ರು..

 

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ (ಲಿಂಗಸೂಗೂರು) ರಾಯಚೂರು

Continue Reading

ರಾಯಚೂರು

ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕ ಪಡೆದು ಚಿನ್ನದ ಪದಕ ಪಡೆದ ರೇಖಾ ಗುಂಡಪ್ಪ..!

Published

on

By

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 2018-19 ನೇ ಸಾಲಿನ ಘಟಿಕೋತ್ಸವ ಸಮಾರಂಭವನ್ನು ಭಾರತೀಯ ಕೃಷಿ ಸಂಶೋಧನಾ ಸಮಿತಿಯ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ.ಆರ್.ಸಿ.ಅಗರವಾಲ್ ಉದ್ಘಾಟಿಸಿದರು. ಕೋವಿಡ್ ಸೋಂಕು ತಡೆ ಕಾರಣ ಚಿನ್ನದ ಪದಕ ಹಾಗೂ ಗರಿಷ್ಠ ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿವಿಧ ವಿಭಾಗಗಳ 49 ವಿದ್ಯಾರ್ಥಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಕುಲಪತಿ ಡಾಕೆಎನ್ ಕಟ್ಟಿಮನಿ ಸಮ್ಮುಖದಲ್ಲಿ ಡಾ.ಆರ್. ಸಿ. ಅಗರವಾಲ್ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಿದರು.ಬಿಎಸ್ಸಿ ಕೃಷಿ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಸಹನಾ ರಾಮನಗೌಡ ಪೊಲೀಸ್ ಪಾಟೀಲ ಆರು ಚಿನ್ನದ ಪದಕಗಳು ಮತ್ತು ನಗದು ಬಹುಮಾನ ಪಡೆದರು. ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದಿರುವ ರೇಖಾ ಗುಂಡಪ್ಪ ಅವರೂ ಆರು ಚಿನ್ನದ ಪದಕಗಳು ಮತ್ತು ನಗದು ಪುರಸ್ಕಾರ ಪಡೆದರು.

ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Continue Reading

ರಾಯಚೂರು

71 ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈರನ್ ಪರಿಶೀಲನೆ- ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್..!

Published

on

By

ರಾಯಚೂರು: ಕೊರೊನಾ ಲಸಿಕೆ ಡ್ರೈರನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 71 ಕೇಂದ್ರಗಳಲ್ಲಿ ಲಸಿಕೆ ಡ್ರೈರನ್ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಆರ್ ವೆಂಕಟೇಶ್ ಕುಮಾರ ತಿಳಿಸಿದ್ದಾರೆ. ಇಂದು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಡ್ರೈರನ್ ಪೂರ್ವ ಸಿದ್ಧತೆಯನ್ನು ಪರಿಶೀಲನೆ ಮಾಡಿ ನಂತರ ಮಾತನಾಡಿದ ಅವರು ಇಂದು ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಡ್ರೈರನ್ ಮಾಡಲು ಸಿದ್ಧತೆಯನ್ನು ಮಾಡಲಾಗಿದೆ.ಒಂದು ಕೇಂದ್ರದಲ್ಲಿ ಕನಿಷ್ಠ 25 ಜನಕ್ಕೆ ಲಸಿಕೆ ಡ್ರೈರನ್ ಮಾಡಬೇಕಾಗುತ್ತದೆ. ಇದನ್ನು ಮಾಡಿದರೆ ವ್ಯಾಕ್ಸಿನ್ ಬಂದಾಗ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಜಿಲ್ಲೆಯಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ತೆಗೆದುಕೊಳ್ಳಗಿದೆ. ಒಂದು ಕೇಂದ್ರದಲ್ಲಿ 5 ಜನ ಅಧಿಕಾರಿಗಳು ಇರುತ್ತಾರೆ, ಡ್ರೈರನ್ ಗೆ ಬರುವ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮತ್ತು ಇನ್ನಿತರ ದಾಖಲಾತಿಯನ್ನು ಕಡ್ಡಾಯವಾಗಿ ತರಬೇಕು. ಇದು 14500 ಜನರಿಗೆ ಅನುಕೂಲವಾಗಲಿದೆ. ನಮ್ಮಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ವೈದ್ಯರು ಸೇರಿದಂತೆ ಗ್ರೂಪ್ ಡಿ ಸಿಬ್ಬಂದಿಗಳು ಮತ್ತು ಖಾಸಗಿ ವೈದ್ಯರನ್ನು ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಸಹ ತೆಗೆದು ಕೊಂಡಿದ್ದೇವೆ ಒಟ್ಟು ಮೂರು ಹಂತಗಳಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತಿದ್ದು. ಇವರ ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರದ ಕೋವಿಡ್ ಪೊಟ್ರಾಲ್ ನಲ್ಲಿ ಅಪ್ ಲೋಡ್ ಮಾಡಿದ್ದೇವೆ. ಎರಡನೇ ಹಂತದಲ್ಲಿ ಇನ್ನುಳಿದ ಅಧಿಕಾರಿಗಳನ್ನು ತೆಗೆದುಕೊಂಡು ಮೂರನೇ ಹಂತದಲ್ಲಿ 50 ವರ್ಷದ ಮೇಲ್ಪಟ್ಟವರನ್ನು ತೆಗೆದುಕೊಳ್ಳಲಾಗುವುದು,ಇವತ್ತು ಡ್ರೈರನ್ ಮಾತ್ರ ಮಾಡುತ್ತಿದ್ದೇವೆ, ಸದ್ಯದಲ್ಲೇ ವ್ಯಾಕ್ಸಿನ್ ಬರುತ್ತದೆ. ಬಂದ ಮೇಲೆ ಒಂದು ದಿನಕ್ಕೆ 100 ಜನರಿಗೆ ವ್ಯಾಕ್ಸಿನ್ ಮಾಡಲು ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದು, ಇವರನ್ನು ಕೋವಿಡ್ ಪೊಟ್ರಾಲ್ ನಲ್ಲಿ ಅವರ ಮಾಹಿತಿಗಳನ್ನು ಸಂಗ್ರಹಿಸಿ ಸಮಯವನ್ನು ನಿಗದಿ ಪಡಿಸುತ್ತೇವೆ ಎಂದರು . ಇನ್ನೂ ಈ ಸಂದಭ೯ದಲ್ಲಿ ಡಿಎಚ್ಓ ರಾಮಕೃಷ್ಣ, ರಿಮ್ಸ್ ಡೀನ್ ಬಸವರಾಜ ಪೀರಾಪುರು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ವರದಿ- ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Continue Reading

Trending

Copyright © 2023 EXPRESS TV KANNADA