Connect with us

ಕೊಪ್ಪಳ

ಕಡಲೆಗೂ ಕಾಡುತ್ತಿರುವ ಕೊರೊನಾ ಭೀತಿ

Published

on

ಕೊಪ್ಪಳ : ರಾಜ್ಯದಲ್ಲಿ ಕಡಲೆಗೂ ಕೊರೊನಾ ಭೀತಿ ಕಾಡುತ್ತಿದ್ದು,ಇದೀಗ ಸಣ್ಣ ರೈತರಿಗೆ ಕಡಲೆ ಸಂರಕ್ಷಿಸೋದೇ ದೊಡ್ಡ ಚಿಂತೆಯಾಗಿದೆ.
ಅ0ದ ಹಾಗೇ ರಾಜ್ಯ ಸರಕಾರ ಏಪ್ರಿಲ್ ೧೦ರ ನಂತರ ಖರೀದಿ ಕೇಂದ್ರ ತೆರೆಯುವ ಸೂಚನೆ ನೀಡಿತ್ತು.ಆದರೆ ಈಗ ಜಗತ್ತನ್ನೇ ಕಾಡುತ್ತಿರುವ ಕೋರೋನಾ ವೈರಸ್‌ನಿಂದ ಖರೀದಿ ಕೇಂದ್ರ ಆರಂಭಿಸೋದು ಅನುಮಾನವಾಗಿದೆ.
ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ೮೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, ಮನೆಯ ಹೊರಗೆ ರೈತರು ಕಡಲೆ ಚೀಲಗಳನ್ನು ಇಡುವಂತಾಗಿದೆ.
ಇನ್ನು ಮಳೆ ಬಂದರೆ ಬೆಳೆ ಹಾಳಾಗುವ, ಹುಳು ಕಾಣಿಸಿಕೊಳ್ಳುವ ಆತಂಕ ರೈತರಿಗೆ ಎದುರಾಗಿರುವುದರಿಂದ ಸರಕಾರ ಈ ಬಗ್ಗೆ ಆಲೋಚಿಸಿ ತುರ್ತಾಗಿ ಕಡಲೆ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ ರೈತರಿಂದ ಕೇಳಿ ಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

ಕೊಪ್ಪಳ

ನೀರಾವರಿ ಇಲಾಖೆ ಇಂಜಿನೀಯರ್ ಗೆ ಪರಸ್ತ್ರೀ ಜೊತೆ ಅನೈತಿಕ ಸಂಬಂಧ- ಪತ್ನಿಯಿಂದ ಇಂಜಿನಿಯರ್ ಗೆ ಬಿತ್ತು ಗೂಸಾ.!

Published

on

By

ಕೊಪ್ಪಳ: ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪರಸ್ತ್ರೀ ಜೊತೆಗಿದ್ದಾಗಲೇ ಪತ್ನಿ ಹಾಗೂ ಮಕ್ಕಳ ಕೈಗೆ ಸಿಕ್ಕಿಬಿದ್ದು ಪರಾರಿಯಾದ ಘಟನೆ ಕೊಪ್ಪಳದ ಕುಷ್ಟಗಿ ಸರ್ಕಲ್ ಬಳಿ ನಡೆದಿದೆ. ಈ ವೇಳೆ ಇಂಜಿನಿಯರ್ ಪತ್ನಿ ಮತ್ತು ಆತನ ಮಕ್ಕಳು ಮಹಿಳೆಯನ್ನು ಥಳಿಸಿದ್ದಾರೆ. ಮದುವೆಯಾಗಿ ಪತ್ನಿ ಮಕ್ಕಳಿದ್ದರೂ ಅಕ್ರಮ ಸಂಬಂಧ ಬೆಳೆಸಿದ್ದ ಇಂಜಿನಿಯರ್ ಮಹಿಳೆಯ ಮನೆಯಲ್ಲಿ ತಂಗಿದ್ದ. ಈ ವಿಷಯ ತಿಳಿದ ಪತ್ನಿ ಮತ್ತು ಮಕ್ಕಳು ಮನೆ ಮೇಲೆ ದಾಳಿ ಮಾಡಿದ್ದಾರೆ. ಬೆಡ್ರೂಮ್ ನಲ್ಲಿ ಇಂಜಿನಿಯರ್ ಮಹಿಳೆಯೊಂದಿಗೆ ಇರುವುದನ್ನು ಗಮನಿಸಿದ ಪತ್ನಿ ಮತ್ತು ಮಕ್ಕಳು ಕೂಗಾಡಿದ್ದು, ಈ ವೇಳೆ ಇಂಜಿನಿಯರ್ ಪರಾರಿಯಾಗಿದ್ದು, ಮಹಿಳೆ ಮೇಲೆ ಆಕ್ರೋಶಗೊಂಡ ಪತ್ನಿ ಹಾಗೂ ಮಕ್ಕಳು ಹಲ್ಲೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲೇಡೆ ವೈರಲ್ ಆಗಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Continue Reading

ಕೊಪ್ಪಳ

ಕಲ್ಯಾಣ ಕರ್ನಾಟಕ ಭಾಗದ ಜನ ಹಿಂದುಳಿದವರೆಂಬ ಕೀಳರಿಮೆಯಿಂದ ಹೊರಬರಲಿ:ಬಿ.ಸಿ.ಪಾಟೀಲ್..!

Published

on

By

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗ ಹಿಂದಿಗಿಂತಲೂ ಈಗ ಹೆಚ್ಚು ಹಸಿರಾಗಿದ್ದು,ಫಲವತ್ತಾಗಿದೆ.ಈ ಭಾಗದ ಜನ ತಾವು ಹಿಂದುಳಿದವರೆಂಬ ಕೀಳರಿಮೆ ಬಿಡಬೇಕು ಎಂದು ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಎರಡುಬಾರಿ ಧ್ವಜಾರೋಹಣ ನೆರವೇರಿಸುತ್ತವೆ.ಆದರೆ ಈ ಭಾಗದಲ್ಲಿ ವರ್ಷಕ್ಕೆ ಮೂರು ಬಾರಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.ಕೋವಿಡ್ನಿಂದಾಗಿ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸಲಾಗದಿದ್ದರೂ ಆತ್ಮಾಭಿಮಾನದಿಂದ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುತ್ತಿದೆ ಎಂದರು.ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಗಬ್ಬಕ್ಕೆ ಕಾರ್ಯಕ್ರಮದಲ್ಲಿ ಶುಭಕೋರಿದ ಬಿ.ಸಿ.ಪಾಟೀಲ್,ಕೋವಿಡ್ ಸಂದರ್ಭದಲ್ಲಿ ಪ್ರಧಾನಿಗಳು 1 ಲಕ್ಷ ಕೋ.ರೂ.ಗಳನ್ನು ಕೃಷಿ ಮೂಲಭೂತ ಸೌಕರ್ತಗಳಿಗಾಗಿ ಮೀಸಲಿಟ್ಟಿದ್ದು, ಈ ಪೈಕಿ 10 ಸಾವಿರ ಕೋ.ರೂ.ಗಳನ್ ಆಹಾರ ಸಂಸ್ಕರಣಾ ಘಟಕಗಳಿಗಾಗಿ ಮೀಸಲಿಡುವ ಮೂಲಕ ರೈತರಿಗೆ ಬೆನ್ನೆಲೆಬಾಗಿ ನಿಂತಿದ್ದಾರೆ. ಕೋವಿಡ್ ಹೊಡೆತದ ನಡುವೆಯೂ ಕೃಷಿ ಕ್ಷೇತ್ರ ಚೇತರಿಕೆ ಕಂಡಿರುವುದು ಸಮಾಧಾನ ತಂದಿದೆ.ಕೃಷಿಕರು ತಮ್ಮ ರಂಗದಲ್ಲಿ ಹೊಸಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು.ಗುಲ್ಬರ್ಗಾದಲ್ಲಿನ ಕೃಷಿವಿಜ್ಞಾನ ಕೇಂದ್ರದಲ್ಲಿ ನಡೆದಂತಹ ವಸ್ತುಪ್ರದರ್ಶನದಲ್ಲಿ ಒಬ್ಬ ಪಪ್ಪಾಯಿ ಬೆಳೆಯುವ ರೈತ ತನ್ನ ಒಂದು ಎಕರೆ ಜಮೀನಿನಲ್ಲಿ 4 ಲಕ್ಷ ರೂ.ಮೌಲ್ಯದ ಫಸಲು ಬೆಳೆದು ಮಾದರಿಯಾಗಿದ್ದಾನೆ.ರೈತರೇ ರೈತರಿಗೆ ಸ್ಫೂರ್ತಿಯಾಗಬೇಕು.ತಂತ್ರಜ್ಞಾನ ಆಧುನಿಕತೆಯ ಬಳಕೆ ಬಗ್ಗೆ ಫಲಾನುಭವಿ ರೈತರೇ ಇತರೆ ರೈತರಿಗೆ ಪ್ರೇರಣೆಯಾಗಬೇಕು ಎಂದು ಬಿ.ಸಿ.ಪಾಟೀಲ್ ಕರೆ ನೀಡಿದರು.ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್,ಜಿ.ಪಂ.ಅಧ್ಯಕ್ಷ ವಿಶ್ವನಾಥ್ ರೆಡ್ಡಿ,ಜಿಲ್ಲಾಧಿಕಾರಿ ವಿಕಾಸ್,ಸಿಇಒ ರಘುನಂದನ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

ಕೊಪ್ಪಳ

ಬಿಜೆಪಿ ಸರ್ಕಾರಕ್ಕೆ ಕೊಪ್ಪಳದಲ್ಲಿ ಟಾಂಗ್ ಕೊಟ್ಟ ಮಾಜಿ ಸಚಿವ…!

Published

on

By

ಕೊಪ್ಪಳ: ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಶಿವರಾಜ್ ತಂಗಡಗಿ ಟಾಂಗ್ ಕೊಟ್ಟಿದ್ದಾರೆ. ದೇಶದ್ರೋಹಿ ಚಟುವಟಿಕೆ ಮಾಡುವ ಯಾವುದೇ ಸಂಘಟನೆ ಇದ್ದರು ಅದನ್ನು ಸರ್ಕಾರ ಕೂಡಲೇ ಬ್ಯಾನ್ ಮಾಡಬೇಕು, RSS ಸಂಘಟನೆ ಬಗ್ಗೆ ಯಾರಾದ್ರೂ ಮಾತಾನಾಡುದ್ರೆ ಅಂತಹವರಿಗೆ ಬಿಜೆಪಿ ಸರ್ಕಾರ ಸಚಿವ ಸ್ಥಾನ ಕೊಡ್ತಾರೆ ಇದು ಎಷ್ಟರ ಮಟ್ಟಿಗೆ ಸರಿ, ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ಆಗಬೇಕು .ಆರ್ ಎಸ್ಎಸ್, ಎಸ್ಟಿಪಿ ಎರಡು ಸಂಘಟನೆಗಳು ಒಂದೇ ಮುಖದ ಎರಡು ನಾಣ್ಯವಿದ್ದಂತೆ. ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು,ದೇಶದಲ್ಲಿ ಅಶಾಂತಿ ಉಂಟು ಮಾಡುವ ಯಾವುದೇ ಸಂಘಟನೆ ಇದ್ದರೂ ಕೂಡ ಅದು ದೇಶದ್ರೋಹ ಸಂಘಟನೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.

Continue Reading

Trending

Copyright © 2023 EXPRESS TV KANNADA

canl覺 ma癟 izle selcuksports deneme bonusu deneme bonusu veren siteler bahis siteleri jojobet casino siteleriHacklink SatışıHack forumyaş sınırı olmayan bahis sitelerikareasbetdeneme bonusu veren siteleradana escortCracked AccountsNetflix Cookiewarez hack forum scripts illegal onlyfans +18 porn Hacker Sextürbanlı escortadanaescortbi.sitesiyah bayrak ayna amirdeneme bonusu veren siteleradana escortadıyaman escortağrı escortaksaray escortamasya escortankara escortantalya escortardahan escortartvin escortaydın escortbalıkesir escortbartın escortbatman escortbayburt escortbilecik escortbingöl escortbitlis escortbolu escortburdur escortbursa escortçanakkale escortçankırı escortçorum escortdenizli escortdiyarbakır escortdüzce escortedirne escortelazığ escorterzincan escorterzurum escorteskisehir escortgaziantep escortgiresun escortgümüşhane escorthakkari escorthatay escortığdır escortisparta escortizmir escortkarabük escortkaraman escortkars escortkastamonu escortkayseri escortkilis escortkırklareli escortkırşehir escortkocaeli escortkonya escortkütahya escortmalatya escortmanisa escortmaras escortmardin escortmersin escortmuğla escortnevşehir escortordu escortosmaniye escortrize escortsakarya escortsamsun escortsiirt escortsinop escortşırnak escortsivas escorttekirdağ escorttokat escorttrabzon escorttunceli escorturfa escortvan escortyalova escortyozgat escortzonguldak escort