Connect with us

ಚಿಕ್ಕಬಳ್ಳಾಪುರ

ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮ ಕರ್ತವ್ಯ: ದ್ವಾರಕಾನಾಯ್ಡು

Published

on

ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮ ಕರ್ತವ್ಯ: ದ್ವಾರಕನಾಥನಾಯ್ಡು

ಗುಡಿಬಂಡೆ: ವಾಸ್ತುಶಿಲ್ಪ ಕಲೆ ಸೇರಿದಂತೆ ಅನೇಕ ಕಲೆಗಳಲ್ಲಿ ವಿಶ್ವ ವಿಖ್ಯಾತಿ ಪಡೆದಂತಹ ಭಾರತದಲ್ಲಿರುವ ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಪ.ಪಂ. ಅಧ್ಯಕ್ಷ ಜಿ.ಎನ್.ದ್ವಾರಕನಾಥನಾಯ್ಡು ತಿಳಿಸಿದರು.

ಪಟ್ಟಣದ ಜೈನರ ಬೀದಿಯಲ್ಲಿರುವ ಶ್ರೀ ಪಾರ್ಶ್ವನಾಥಸ್ವಾಮಿ, ಶ್ರೀ ಚಂದ್ರನಾಥಸ್ವಾಮಿ ಜೈನ ದೇವಾಲಯಗಳ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಯಾತ್ರಿ ನಿವಾಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹಲವಾರು ಪುರಾತನ ಕಟ್ಟಡಗಳಿವೆ. ಪಟ್ಟಣದ ಹೊರವಲಯದಲ್ಲಿ ಪಾಳೇಗಾರರು ನಿರ್ಮಿಸಿರುವ ಅಮಾನಿಬೈರಸಾಗರಕೆರೆ, ಏಳು ಸುತ್ತಿನ ಸುರಸದ್ಮಗಿರಿ ಬೆಟ್ಟ, ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟ, ಮಂಡಿಕಲ್ಲು ಬಳಿಯ ಆವುಲಬೆಟ್ಟ ಸೇರಿದಂತೆ ಅನೇಕ ಪುರಾತನ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಮಾರಕಗಳಿದ್ದು, ಅವುಗಳನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ದಿಪಡಿಸಬೇಕಿದೆ. ಅಮಾನಿಬೈರಸಾಗರ ದಡದಲ್ಲಿ ಜೈನ ಮುನಿಗಳು ತಪ್ಪಸ್ಸು ಮಾಡಿದ ಪಾದಬೆಟ್ಟದಲ್ಲಿ ಗೊಮ್ಮಟೇಶ್ವರ ಪ್ರತಿಮೆಯನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

ನಂತರ ಜೈನ ದಿಗಂಬರ ಸಮಿತಿಯ ತಾಲ್ಲೂಕು ಅಧ್ಯಕ್ಷ ಜಿ.ಬಿ.ಪುಟ್ಟಣ್ಣ ಮಾತನಾಡಿ ಗುಡಿಬಂಡೆಯಲ್ಲಿರುವ ಜೈನ ದೇಗುಲಗಳಿಗೆ ಸಾವಿರಾರು ವರುಷಗಳ ಇತಿಹಾಸವಿದೆ. ಅದರ ನೆನಪಿಗಾಗಿ ಜೈನ ದೇವಾಲಯಗಳು ನಿರ್ಮಾಣವಾಗಿದೆ. ಶೀಥಿಲಾವ್ಯವಸ್ಥೆಯಲ್ಲಿರುವ ದೇಗುಲಗಳನ್ನು ಜೀರ್ಣೋದ್ದಾರ ಮಾಡಲು ಸಮಿತಿಯನ್ನು ರಚಿಸಿಕೊಂಡು ಧರ್ಮಸ್ಥಳದ ಟ್ರಸ್ಟ್ ಹಾಗೂ ಜೈನ ಸುಮುದಾಯದ ದಾನಿಗಳಿಂದ ೨ ದೇವಾಲಯಗಳನ್ನು ಅಭಿವೃದ್ದಿ ಪಡಿಸಲಾಗಿದ್ದು, ಪ್ರವಾಸಿಗರು ಹಾಗೂ ಜೈನ ಭಕ್ತರಿಗಾಗಿ ವಸತಿ ಗೃಹವನ್ನು ಸರ್ಕಾರ ಹಾಗೂ ಸಮಿತಿಯ ಸಹಕಾರದಿಂದ ನಿರ್ಮಾಣವಾಗಲಿದೆ. ಜೊತೆಗೆ ದೇವಾಲಯದಲ್ಲಿ ಇನ್ನೂ ಅನೇಕ ಅಭಿವೃದ್ದಿ ಕೆಲಸಗಳು ನಡೆಯಬೇಕಿದ್ದು, ಸಾರ್ವಜನಿಕರು ಹಾಗೂ ಭಕ್ತರು ಸಹಕರಿಸಬೇಕೆಂದರು.

ಈ ವೇಳೆ ಜೈನ ದಿಗಂಬರ ಸಮಿತಿ ಉಪಾಧ್ಯಕ್ಷ ನಿವೃತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಅಜೀತ್‌ಪ್ರಸಾದ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗರಾಜ, ಸದಸ್ಯರಾದ ರಾಜಣ್ಣ, ರಮೇಶ, ಪ್ರವಾಸೋಧ್ಯಮ ಇಲಾಖೆಯ ಕಛೇರಿ ಮುಖ್ಯಸ್ಥ ನರೇಶ, ಕಟ್ಟಡದ ಗುತ್ತಿಗೆದಾರರಾದ ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾಗಳಾದ ತ್ಯಾಗರಾಜ, ನವೀನ್ ಕುಮಾರ್, ವೀರಭದ್ರಯ್ಯ, ದೇವಾಲಯದ ಟ್ರಸ್ಟಿಗಳು ಸೇರಿದಂತೆ ಹಲವರು ಇದ್ದರು.
ದೇವರಾಜ.ಎನ್.ಆರ್.ಸುನಿಲ್.ವಿ. ಚಿಕ್ಕಬಳ್ಳಾಪುರ

ರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮ ಕರ್ತವ್ಯ: ದ್ವಾರಕನಾಥನಾಯ್ಡು

ಗುಡಿಬಂಡೆ: ವಾಸ್ತುಶಿಲ್ಪ ಕಲೆ ಸೇರಿದಂತೆ ಅನೇಕ ಕಲೆಗಳಲ್ಲಿ ವಿಶ್ವ ವಿಖ್ಯಾತಿ ಪಡೆದಂತಹ ಭಾರತದಲ್ಲಿರುವ ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಪ.ಪಂ. ಅಧ್ಯಕ್ಷ ಜಿ.ಎನ್.ದ್ವಾರಕನಾಥನಾಯ್ಡು ತಿಳಿಸಿದರು.

ಪಟ್ಟಣದ ಜೈನರ ಬೀದಿಯಲ್ಲಿರುವ ಶ್ರೀ ಪಾರ್ಶ್ವನಾಥಸ್ವಾಮಿ, ಶ್ರೀ ಚಂದ್ರನಾಥಸ್ವಾಮಿ ಜೈನ ದೇವಾಲಯಗಳ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಯಾತ್ರಿ ನಿವಾಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹಲವಾರು ಪುರಾತನ ಕಟ್ಟಡಗಳಿವೆ. ಪಟ್ಟಣದ ಹೊರವಲಯದಲ್ಲಿ ಪಾಳೇಗಾರರು ನಿರ್ಮಿಸಿರುವ ಅಮಾನಿಬೈರಸಾಗರಕೆರೆ, ಏಳು ಸುತ್ತಿನ ಸುರಸದ್ಮಗಿರಿ ಬೆಟ್ಟ, ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟ, ಮಂಡಿಕಲ್ಲು ಬಳಿಯ ಆವುಲಬೆಟ್ಟ ಸೇರಿದಂತೆ ಅನೇಕ ಪುರಾತನ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಮಾರಕಗಳಿದ್ದು, ಅವುಗಳನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ದಿಪಡಿಸಬೇಕಿದೆ. ಅಮಾನಿಬೈರಸಾಗರ ದಡದಲ್ಲಿ ಜೈನ ಮುನಿಗಳು ತಪ್ಪಸ್ಸು ಮಾಡಿದ ಪಾದಬೆಟ್ಟದಲ್ಲಿ ಗೊಮ್ಮಟೇಶ್ವರ ಪ್ರತಿಮೆಯನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

ನಂತರ ಜೈನ ದಿಗಂಬರ ಸಮಿತಿಯ ತಾಲ್ಲೂಕು ಅಧ್ಯಕ್ಷ ಜಿ.ಬಿ.ಪುಟ್ಟಣ್ಣ ಮಾತನಾಡಿ ಗುಡಿಬಂಡೆಯಲ್ಲಿರುವ ಜೈನ ದೇಗುಲಗಳಿಗೆ ಸಾವಿರಾರು ವರುಷಗಳ ಇತಿಹಾಸವಿದೆ. ಅದರ ನೆನಪಿಗಾಗಿ ಜೈನ ದೇವಾಲಯಗಳು ನಿರ್ಮಾಣವಾಗಿದೆ. ಶೀಥಿಲಾವ್ಯವಸ್ಥೆಯಲ್ಲಿರುವ ದೇಗುಲಗಳನ್ನು ಜೀರ್ಣೋದ್ದಾರ ಮಾಡಲು ಸಮಿತಿಯನ್ನು ರಚಿಸಿಕೊಂಡು ಧರ್ಮಸ್ಥಳದ ಟ್ರಸ್ಟ್ ಹಾಗೂ ಜೈನ ಸುಮುದಾಯದ ದಾನಿಗಳಿಂದ ೨ ದೇವಾಲಯಗಳನ್ನು ಅಭಿವೃದ್ದಿ ಪಡಿಸಲಾಗಿದ್ದು, ಪ್ರವಾಸಿಗರು ಹಾಗೂ ಜೈನ ಭಕ್ತರಿಗಾಗಿ ವಸತಿ ಗೃಹವನ್ನು ಸರ್ಕಾರ ಹಾಗೂ ಸಮಿತಿಯ ಸಹಕಾರದಿಂದ ನಿರ್ಮಾಣವಾಗಲಿದೆ. ಜೊತೆಗೆ ದೇವಾಲಯದಲ್ಲಿ ಇನ್ನೂ ಅನೇಕ ಅಭಿವೃದ್ದಿ ಕೆಲಸಗಳು ನಡೆಯಬೇಕಿದ್ದು, ಸಾರ್ವಜನಿಕರು ಹಾಗೂ ಭಕ್ತರು ಸಹಕರಿಸಬೇಕೆಂದರು.

ಈ ವೇಳೆ ಜೈನ ದಿಗಂಬರ ಸಮಿತಿ ಉಪಾಧ್ಯಕ್ಷ ನಿವೃತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಅಜೀತ್‌ಪ್ರಸಾದ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗರಾಜ, ಸದಸ್ಯರಾದ ರಾಜಣ್ಣ, ರಮೇಶ, ಪ್ರವಾಸೋಧ್ಯಮ ಇಲಾಖೆಯ ಕಛೇರಿ ಮುಖ್ಯಸ್ಥ ನರೇಶ, ಕಟ್ಟಡದ ಗುತ್ತಿಗೆದಾರರಾದ ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾಗಳಾದ ತ್ಯಾಗರಾಜ, ನವೀನ್ ಕುಮಾರ್, ವೀರಭದ್ರಯ್ಯ, ದೇವಾಲಯದ ಟ್ರಸ್ಟಿಗಳು ಸೇರಿದಂತೆ ಹಲವರು ಇದ್ದರು.
ದೇವರಾಜ.ಎನ್.ಆರ್.ಸುನಿಲ್.ವಿ. ಚಿಕ್ಕಬಳ್ಳಾಪುರ

Continue Reading
Click to comment

Leave a Reply

Your email address will not be published. Required fields are marked *

ಚಿಕ್ಕಬಳ್ಳಾಪುರ

ಅಕ್ಕನ ಸುಖ ಸಂಸಾರಕ್ಕಾಗಿ ಜಗಳವಾಡಿ ಬಾವನಿಂದಲೇ ಹತ್ಯೆಯಾದ ಬಾಮೈದ..!

Published

on

By

ಚಿಕ್ಕಬಳ್ಳಾಪುರ: ಅಕ್ಕನ ಸಂಸಾರ ಸುಖವಾಗಿರಲಿ ಎಂದು ಬಾವನ ಅನೈತಿಕ ಸಂಬಂಧ ಪ್ರಶ್ನಿಸಿದ ಹಿನ್ನೆಲೆ ಬಾವನೇ ಬಾಮೈದನನ್ನು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಮ್ರಾನ್ ಖಾನ್ (25) ಕೊಲೆಯಾದ ಯುವಕ, ಬಾವ ಸಾಧಿಕ್ ಪಾಷಾ@ಚಾಂದ್, ಟಿಪ್ಪು, ಸಮಿವುಲ್ಲಾ, ಸಯ್ಯದ್ ಕೊಲೆ ಮಾಡಿರುವ ಆರೋಪಿಗಳು. ಕಳೆದ 5 ವರ್ಷಗಳ ಹಿಂದೆ ರುಕ್ಸಾನಾ ಎಂಬಾಕೆಯನ್ನು ಚಾಂದ್ ಪಾಷಾ ಮದವೆಯಾಗಿದ್ದ ನಂತರ ಮುಮ್ತಾಜ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಇಮ್ರನ್ ಖಾನ್ ಸಾಕಷ್ಟು ಬಾರಿ ಚಾಂದ್ ಪಾಷಾ ಜೊತೆಗೆ ಜಗಳ ಮಾಡಿದ್ದ. ಇತ್ತೀಚೆಗೆ ಇದೇ ವಿಚಾರವಾಗಿ ಬಾವನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದ. ಇದರಿಂದ ಕೋಪಿತಗೊಂಡ ಚಾಂದ್ ಪಾಷಾ ಸೇಡಿಗೆ ಸೇಡು ತೀರಿಸಿಕೊಳ್ಳಲು ಬಾಮೈದನ ಕೊಲೆಗೆ ತನ್ನ ಸ್ನೇಹಿತರೊಂದಿಗೆ ಪ್ಲಾನ್ ರೂಪಿಸಿದ್ದ. ಅದರಂತೆ ಜನವರಿ 3ನೇ ತಾರೀಖು ಆಂಧ್ರಪ್ರದೇಶದ ಹಿಂದೂಪುರ ಮೂಲದ ಲಾರಿ ಚಾಲಕರಿಂದ ಬರ್ಭರವಾಗಿ ದೇಹದೆಲ್ಲೇಡೆ ಡ್ರಾಗರ್ ನಿಂದ ಚುಚ್ಚಿ ಚುಚ್ಚಿ, ಮರ್ಮಾಂಗ ಕತ್ತರಿಸಿ ಕೊಲೆ ಮಾಡಿಸಿ ಎಸ್ಕೇಪ್ ಆಗಿದ್ದ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೌರಿಬಿದನೂರು ಪೊಲೀಸರು, ನಾಲ್ಕೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕೊಲೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು, ಚಾಂದ್ ಪಾಷಾ 2ನೇ ಹೆಂಡತಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳ ಕುರಿತು ಮುಮ್ತಾಜ್ ಬಾಯಿ ಬಿಟ್ಟಿದ್ದಾಳೆ. ಗೌರಿಬಿದನೂರು ವೃತ್ತ ನಿರೀಕ್ಷಕ ಎಸ್.ರವಿ ಹಾಗೂ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Continue Reading

ಚಿಕ್ಕಬಳ್ಳಾಪುರ

ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾದ ಶ್ರೀ ಧರ್ಮಸ್ಥಳ ಯೋಜನೆ.!

Published

on

By

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದ ಕೆರೆ ಅಂಗಳದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಅಡಿಯಲ್ಲಿ ತಾಲ್ಲೂಕಿನ ಬೋದುಗೂರು ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮದ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ತದನಂತರ ಅದ್ಯಕ್ಷತೆ ವಹಿಸಿದ ಕೆರೆ ಬಳಕೆದಾರರ ಸಂಘದ ಅದ್ಯಕ್ಷ ವೆಂಕಟಸ್ವಾಮಿ ರೆಡ್ಡಿ ಮಾತನಾಡಿ ಈಗಾಗಲೆ ಗ್ರಾಮ ಪ್ರದೇಶಗಳಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಪೂಜ್ಯರ ಸಮಕ್ಷಮದಲ್ಲಿ ಕೆರೆ ಹೊಳೆತ್ತುವ ಕಾರ್ಯ ನಡೆಯುತ್ತಿದಿದ್ದು, ಇಂದು ನಮ್ಮ ಬೋದಗೂರು ಗ್ರಾಮದ ಕೆರೆ ಹೂಳೆತ್ತಲು 18.50 ಲಕ್ಷ ಬಿಡುಗಡೆ ಮಾಡಿ ಪುಣ್ಯವಂತರಾಗಿದ್ದಾರೆ ಎಂದರು. ಮಳೆ ನೀರು ಸರಾಗವಾಗಿ ಹರಿಯದೆ ಕೆರೆಗೆ ನೀರು ಬರುತ್ತಿಲ್ಲ ಮೊದಲು ನೀರು ಬರಲು ಕಾಲುವೆಗಳು ತೆರವುಗೊಳಿಸಿ ಸ್ವಚ್ಚಗೊಳಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಇನ್ನೂ ಈ ಸಂದರ್ಭದಲ್ಲಿ ವೃದ್ಧರಿಗೆ ಮಾಶಾಸನ ಬಿಡುಗಡೆಗೊಳಿಸಿದರು.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Continue Reading

ಚಿಕ್ಕಬಳ್ಳಾಪುರ

ಭಿಕ್ಷುಕನಿಗೆ ಊಟ ನೀಡಿ ಮಾನವೀಯತೆ ಮೆರೆದ ಎಎಸ್ಐ..!

Published

on

By

ಚಿಕ್ಕಬಳ್ಳಾಪುರ: ಪೊಲೀಸರ ಕುರಿತು ಸಾಕಷ್ಟು ನಕಾರಾತ್ಮಕ ಆಲೋಚನೆಗಳೇ ಕಣ್ಣ ಮುಂದೆ ಬರುತ್ತದೆ, ಆದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ಮಾನವೀಯತೆ ಮೆರದು ಜನರ ಮೆಚ್ಚಿಗೆಗಳಿಸಿದ್ದಾರೆ. ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಊಟವಿಲ್ಲದೆ ಅಸ್ವಸ್ಥಗೊಂಡಿದ್ದ ಭಿಕ್ಷುಕನನ್ನು ಗಮನಿಸಿ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣರಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಎಎಸ್ಐ ಸೋಮಶೇಖರ್ ಕಾರ್ಯವೈಕರಿ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Continue Reading

Trending

Copyright © 2023 EXPRESS TV KANNADA

canl覺 ma癟 izle selcuksports deneme bonusu deneme bonusu veren siteler bahis siteleri jojobet http://www.iztacalco.cdmx.gob.mx/inicio/guvenilir-bahis-siteleri.html deneme bonusu casino siteleriHacklink SatışıHack forumyaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirdeneme bonusu veren sitelerkareasbet girişBursa EscortBakırköy Escort, Ataköy Escortbahis forumkareasbetbetingo güncel girişdizimatFındıkzade Escortbedavabahis.onlineBitcoin Kabul Eden Bahis Sitelerigüvenilir casino siteleridigital marketing agencydeneme bonusu veren sitelergobahis girişasper casino girişhermesbetTelegram Gruplarıistanbul escortesbet girişbullbahis girişbenimbahis girişbenimbahis