ಟ್ರಾಯ್ ನೀತಿಯಿಂದ ಕೇಬಲ್ ಆಪರೇಟರ್‌ಗಳು ಸಂಕಷ್ಟಕ್ಕೆ ಸಿಲುಕುತ್ತಾರೆ

ಬಳ್ಳಾರಿ ಡಿಸೆಂಬರ್ ೨೧: ಕೇಬಲ್ ಟಿ.ವಿ. ಎಂಆರ್‌ಪಿ ದರದಲ್ಲಿ ಅಥವಾ ಟ್ರಾಯ್ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತೊಮ್ಮೆ ಪರಿಶೀಲಿಸಬೇಕೆಂದು ಬಳ್ಳಾರಿ ಜಿಲ್ಲಾ ಕೇಬಲ್ ಆಪರೇಟರ‍್ಸ್ ಸಂಘದ ವತಿಯಿಂದ ಒತ್ತಾಯಿಸಲಾಯಿತು.
ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಬಳ್ಳಾರಿ ಕೇಬಲ್ ಆಪರೇಟರ‍್ಸ್ ಸಂಘದ ಸದಸ್ಯರುಗಳು, ಕಳೆದ ಮೂರು ದಶಕಗಳಿಂದ ಕೇಬಲ್ ಆಪರೇಟರ‍್ಸ್ ಕೇಬಲ್ ಉದ್ದಿಮೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಈಗ ನೀತಿಯಿಂದ ಕೇಂದ್ರ ಸರ್ಕಾರ ಹೆಚ್ಚಳದ ದರವನ್ನು ನಿಗದಿ ಮಾಡಿರುವುದರಿಂದ ಗ್ರಾಹಕರ ಜೊತೆಗೆ ಆಪರೇಟರ್‌ಗಳು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಸುದ್ದಿಗೋಷ್ಟಿಯಲ್ಲಿ ಅವರು ತಿಳಿಸಿದರು.

Please follow and like us:

Related posts

Leave a Comment