ಸಿಂಧನೂರಿನಲ್ಲಿ ಅಕ್ರಮ ಮರಳು ದಂಧೆ ಮೇಲೆ ದಾಳಿ

ಸಿಂಧನೂರು: ಅಕ್ರಮ ಮರಳು ಮಾಫಿಯಾ ಮೇಲೆ ಪೊಲೀಸರು ದಾಳಿ ನಡೆಸಿರೋ ಘಟನೆ ತಾಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಗ್ರಾಮಿಣ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಇಂದು ಬೆಳಿಗ್ಗೆ ಹರೆಟ್ಟನೂರ ಗ್ರಾಮದ ಹಳ್ಳದ ಬಳಿ ದಾಳಿ ನಡೆಸಿದೆ.

ದಾಳಿ ವೇಳೆ ಮರಳು ದಂಧೆಕೋರರು ರಾಜಾರೋಷದಿಂದ ಅಕ್ರಮವಾಗಿ ಮರಳನ್ನು ಟ್ರ‍್ಯಾಕ್ಟರ್‌ಗೆ ಲೋಡ್ ಮಾಡುತ್ತಿದ್ದದ್ದು ಕಂಡು ಬಂದಿದೆ.ಈ ವೇಳೆ ಪೊಲೀಸರ ತಂಡ ದಾಳಿ ಮಾಡಿದಾಗ ಚಾಲಕ ತನ್ನ ಟ್ರ‍್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ.

ಇನ್ನು ಮರಳು ತುಂಬಿದ ಟ್ರ‍್ಯಾಕ್ಟರನ್ನು ವಶಕ್ಕೆ ಪಡೆದು, ಚಾಲಕ ಮತ್ತು ಟ್ರ‍್ಯಾಕ್ಟರ್ ಮಾಲೀಕನ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ರಾಘವೇಂದ್ರ ತಿಳಿಸಿದ್ದಾರೆ.

Please follow and like us:

Related posts

Leave a Comment